Home Mangalorean News Kannada News ಅತಿ ವೇಗದ ಚಾಲನೆ – ಕೂಳೂರು ಸೇತುವೆಯಿಂದ ನದಿಗೆ ಬಿದ್ದ ಬೈಕ್ – ಇಬ್ಬರು ಸವಾರರ...

ಅತಿ ವೇಗದ ಚಾಲನೆ – ಕೂಳೂರು ಸೇತುವೆಯಿಂದ ನದಿಗೆ ಬಿದ್ದ ಬೈಕ್ – ಇಬ್ಬರು ಸವಾರರ ಸಾವು

Spread the love

ಅತಿ ವೇಗದ ಚಾಲನೆ – ಕೂಳೂರು ಸೇತುವೆಯಿಂದ ನದಿಗೆ ಬಿದ್ದ ಬೈಕ್ – ಇಬ್ಬರು ಸವಾರರ ಸಾವು

ಮಂಗಳೂರು: ಬೈಕೊಂದು ನಿಯಂತ್ರಣ ತಪ್ಪಿದ ಬೈಕ್ ಸವಾರರಿಬ್ಬರು ಕೂಳೂರು ಸೇತುವೆಯಿಂದ ನದಿಗೆ ಬಿದ್ದ ಪರಿಣಾಮ ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ

ಮೃತರನ್ನು ಆಕಾಶ ಭವನ ನಿವಾಸಿ ನಿಖಿಲ್ (21) ಮತ್ತು ಕೂಳೂರಿನ ವಿಜಯ್ (22) ಎಂದು ಗುರುತಿಸಲಾಗಿದೆ.

ಇಬ್ಬರೂ ಕೂಡ ಅತೀ ವೇಗವಾಗಿ ಕುಳೂರು ಸೇತುವೆ ರಸ್ತೆಯಲ್ಲಿ ಬೈಕನ್ನು ಚಲಾಯಿಸಿಕೊಂಡು ಬಂದಿದ್ದು, ನಿಯಂತ್ರಣ ತಪ್ಪಿದ ಬೈಕ್ ಅಫಘಾತಕ್ಕಿಡಾಗಿದ್ದು, ಬೈಕ್ ಸಮೇತವಾಗಿ ಇಬ್ಬರೂ ಕೂಡ ನದಿಗೆ ಬಿದ್ದಿದ್ದು, ಈ ವೇಳೆ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಸ್ಥಳೀಯ ಪೋಲಿಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.


Spread the love

Exit mobile version