Home Mangalorean News Kannada News “ಅವಕಾಶದ ಸದ್ಬಳಕೆಯೇ ನಾಯಕತ್ವದ ಬೆಳವಣಿಗೆ” – ಐವನ್ ಡಿಸೋಜ

“ಅವಕಾಶದ ಸದ್ಬಳಕೆಯೇ ನಾಯಕತ್ವದ ಬೆಳವಣಿಗೆ” – ಐವನ್ ಡಿಸೋಜ

Spread the love

“ಅವಕಾಶದ ಸದ್ಬಳಕೆಯೇ ನಾಯಕತ್ವದ ಬೆಳವಣಿಗೆ” – ಐವನ್ ಡಿಸೋಜ

ಮಂಗಳೂರು: ಡಾ.ಪಿ.ದಯಾನಂದ ಪೈ- ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿಯ ಯುವ ರೆಡ್ ಕ್ರಾಸ್‍ನ ವಾರ್ಷಿಕ ವಿಶೇಷ ಶಿಬಿರವು ಕಾಲೇಜಿನ ಆವರವಣದಲ್ಲಿ ಹಮ್ಮಿಕೊಂಡಿದ್ದು,   ಐವನ್ ಡಿಸೋಜಒಐಅಯವರು ಕಾರ್ಯಕ್ರಮವನ್ನು ಉದ್ಘಾಟಿಸಿ, “ವಿದ್ಯಾರ್ಥಿಗಳು ಜೀವನದಲ್ಲಿ ದೊರಕುವಂತಹ ಎಲ್ಲಾ ಚಟುವಟಿಕೆಗಳಲ್ಲಿ, ತರಬೇತಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಅತ್ಯಗತ್ಯ. ಅವಕಾಶದ ಸದ್ಬಳಕೆಯೇ ನಾಯಕತ್ವದ ಬೆಳವಣಿಗೆ” ಎಂದು ನುಡಿದು ಶಿಬಿರಾರ್ಥಿಗಳನ್ನು ಉತ್ತೇಜಿಸಿದರು ಹಾಗೂ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ  ಶಾಂತಾರಾಮ್ ಶೆಟ್ಟಿ ಅಧ್ಯಕ್ಷರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ, ಸಂಪನ್ಮೂಲ ವ್ಯಕ್ತಿ ಶ್ರೀ ಸಂತೋಷ್ ಪೀಟರ್ ಡಿಸೋಜ, ಅಧ್ಯಕ್ಷರಾಗಿ ಪ್ರೊ.ರಾಜಶೇಖರ ಹೆಬ್ಬಾರ್ ಸಿ. ಪ್ರಾಂಶುಪಾಲರು, ಯುವ ರೆಡ್ ಕ್ರಾಸ್ ಸಂಚಾಲಕರಾದ ಡಾ.ಮಹೇಶ್.ಕೆ.ಬಿ., ಯುವ ರೆಡ್ ಕ್ರಾಸ್ ನಾಯಕಿ ಪವಿತ್ರ ಉಪಸ್ಥಿತರಿದ್ದರು.

ಕುಮಾರಿ ಸಂಧ್ಯಾ ಸ್ವಾಗತಿಸಿದರು, ಕುಮಾರಿ ಹರ್ಷಿತ ವಂದಿಸಿದರು ಹಾಗೂ ಕುಮಾರಿ ಯಶಸ್ವಿನಿ ಕಾರ್ಯಕ್ರಮವನ್ನು ನಿರ್ವಹಿಸಿದರು.


Spread the love

Exit mobile version