Home Mangalorean News Kannada News ಉಡುಪಿ: ಆ.3 ರಂದು ‘ನೆರೆ-ಬೆಂಕಿ ಅವಘಡ- ಭೂಕುಸಿತ – ಒಂದು ಚರ್ಚೆ’

ಉಡುಪಿ: ಆ.3 ರಂದು ‘ನೆರೆ-ಬೆಂಕಿ ಅವಘಡ- ಭೂಕುಸಿತ – ಒಂದು ಚರ್ಚೆ’

Spread the love

ಉಡುಪಿ: ಆ.3 ರಂದು ‘ನೆರೆ-ಬೆಂಕಿ ಅವಘಡ- ಭೂಕುಸಿತ – ಒಂದು ಚರ್ಚೆ’

ಉಡುಪಿ: ನಗರದಲ್ಲಿ ಪ್ರತಿವರ್ಷ ಕಾಡುತ್ತಿರುವ ಕೃತಕ ನೆರೆ ಹಾವಳಿ, ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಸಂಭವಿಸುತ್ತಿರುವ ಭೂ ಕುಸಿತ ಮತ್ತು ಉಡುಪಿ ಅನೇಕ ಕಡೆ ನಡೆದ ಬೆಂಕಿ ಅವಘಡಗಳ ಕುರಿತು ಚರ್ಚಾ ಕಾರ್ಯಕ್ರಮ ನಡೆಸಲು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದೆ.

ಆ.3ರಂದು ಶನಿವಾರ ಬೆಳಗ್ಗೆ 10.30ಕ್ಕೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಉಡುಪಿ ಪತ್ರಿಕಾ ಭವನದಲ್ಲಿ ‘ಕೃತಕ ನೆರೆ ಹಾವಳಿ- ಬೆಂಕಿ ದುರಂತ- ಭೂಕುಸಿತ: ಒಂದು ಚರ್ಚೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ..

ಈ ಕಾರ್ಯಕ್ರಮದಲ್ಲಿ ನೆರೆಯ ಕುರಿತು ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ, ಬೆಂಕಿ ದುರಂತದ ಕುರಿತು ಉಡುಪಿ ಜಿಲ್ಲಾ ಅಗ್ನಿ ಶಾಮಕದಳ ಅಧಿಕಾರಿ ವಿನಾಯಕ ಉ.ಕಲ್ಗುಟಕರ ಹಾಗೂ ಭೂ ಕುಸಿತದ ಬಗ್ಗೆ ಹಿರಿಯ ಭೂಗರ್ಭ ಶಾಸ್ತ್ರಜ್ಞ, ಮಣಿಪಾಲದ ಡಾ.ಉದಯ ಶಂಕರ್ ಮಾತನಾಡಲಿದ್ದಾರೆ. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ತಿಳಿಸಿದ್ದಾರೆ


Spread the love

Exit mobile version