ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಗ್ರಾಪಂ ಸದಸ್ಯರು ಸಹಕಾರ ನೀಡಿ : ಕಿರಣ್ ಕುಮಾರ್ ಉದ್ಯಾವರ

Spread the love

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಗ್ರಾಪಂ ಸದಸ್ಯರು ಸಹಕಾರ ನೀಡಿ : ಕಿರಣ್ ಕುಮಾರ್ ಉದ್ಯಾವರ

 ಉಡುಪಿ: ರಾಜ್ಯದಲ್ಲಿ ಕೊರೊನ ಆತಂಕದಲ್ಲಿ ನಡೆಯದ ಪರೀಕ್ಷೆಯು ಇದೆ ಜೂನ್ 25 ರಿಂದ ನಡೆಯಲಿದ್ದು ಈ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಸಹಾಯ ಸಹಕಾರವನ್ನು ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತ್ ಸದಸ್ಯರು ಮಾಡಬೇಕೆಂದು   ಕಿರಣ್ ಕುಮಾರ್ ಉದ್ಯಾವರ ಗ್ರಾಮ ಪಂಚಾಯ್ತ್ ಸದಸ್ಯರು , ರಾಷ್ಟ್ರೀಯ ಮೀನುಗಾರ ಕಾಂಗ್ರೆಸ್ ಕಾರ್ಯದರ್ಶಿ ವಿನಂತಿಸಿದ್ದರೆ.

  ರಾಜ್ಯದಲ್ಲಿ ಎಲ್ಲಾ ಗ್ರಾಮ ಪಂಚಾಯತಿನ ಪ್ರತಿ ವಾರ್ಡಿನಲ್ಲಿ 2 ಅಥವಾ 3 ಮಂದಿ ಸದ್ಯರು ಪ್ರತಿನಿಧಿಸುತಿರುತಾರೆ. ಅವರಿಗೆಲ್ಲಾ ಅವರ ವಾರ್ಡಿನಲ್ಲಿ ಯಾರೆಲ್ಲ ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಎಂದು ತಿಳಿದಿರುತ್ತಾರೆ. ಕೆಲವು ಕಡೆ ಕಡುಬಡವರಾದ ಹಾಗೂ  ಕೆಲವು ವಿದ್ಯಾರ್ಥಿಗಳಿಗೆ  ಕೊರೊನ ದಿಂದಾಗಿ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲು ಅನಾನುಕುಲವಾಗಬಹುದು. ಇಂತಹ ವಿದ್ಯಾರ್ಥಿಗಳಿಗೆ ಅವರ ಭವಿಷ್ಯದ ದೃಷ್ಠಿಯಿಂದ ವಾಹನದ ವ್ಯವಸ್ಥೆ ಅಥವ ಅವರನ್ನು ತಮ್ಮ ಸ್ವಂತ ವಾಹನದಲ್ಲಿ ಪರೀಕ್ಷಾಕೇಂದ್ರಗಳಿಗೆ ತಲುಪಿಸಬೇಕಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love