Home Mangalorean News Kannada News ಐಸಿವೈಎಂ ಪದಗ್ರಹಣ – ಪ್ರತಿಭಾನ್ವಿತರಿಗೆ ಪುರಸ್ಕಾರ

ಐಸಿವೈಎಂ ಪದಗ್ರಹಣ – ಪ್ರತಿಭಾನ್ವಿತರಿಗೆ ಪುರಸ್ಕಾರ

Spread the love
RedditLinkedinYoutubeEmailFacebook MessengerTelegramWhatsapp

ಐಸಿವೈಎಂ ಪದಗ್ರಹಣ – ಪ್ರತಿಭಾನ್ವಿತರಿಗೆ ಪುರಸ್ಕಾರ

ಪೆರುವಾಯಿ: ಫಾತಿಮಾ ಮಾತೆಯ ದೇವಾಲಯ, ಮುಚ್ಚಿರಪದವು ಪೆರುವಾಯಿಇದರ ಭಾರತೀಯ ಕ್ಯಾಥೋಲಿಕ್‍ ಯುವ ಸಂಚಲನದ ನೂತನ ಪದಾಧಿಕಾರಿಗಳ ಪ್ರಮಾಣವಚನ ಕಾರ್ಯಕ್ರಮ ನಡೆಯಿತು. ಚರ್ಚಿನ ಧರ್ಮಗುರುಗಳಾದ ರೆ.ಫಾ| ವಿನೋದ್ ಲೋಬೊ ಇವರು ಪ್ರಮಾಣ ವಚನ ವಾಚಿಸಿದರು.

image001peruvai church-sorake-20160709-001 image002peruvai church-sorake-20160709-002

ಯುವ ಸಂಚಲನದ ಅಧ್ಯಕ್ಷ ಲೈಝಿಲ್ ಪ್ರೇಮ್‍ಡಿಸೋಜ, ಉಪಾಧ್ಯಕ್ಷೆ ಪ್ರೀತಿ ಡಿಸೋಜ, ಕಾರ್ಯದರ್ಶಿ ಅಶ್ವಿನ್ ಫೆರಾವೊ, ಜೊತೆ ಕಾರ್ಯದರ್ಶಿ ನಯನ ಕುಟಿನ್ಹಾ, ಖಜಾಂಚಿಯಾಗಿ ಸೆವಿನ್‍ಎಡ್ವಿನ್, ಲೆಕ್ಕಪರಿಶೋಧಕ ಸಂತೋಷ್ ಮೊಂತೇರೊ, ಯುವ ಪ್ರತಿನಿಧಿಯಾಗಿರೋಷಿತ್ ಸ್ಮಿತಾ, ನಿಕಟ ಪೂರ್ವಅಧ್ಯಕ್ಷ ರಾಜೇಶ್ ಫೆರಾವೊ ಹಾಗೂ ಇತರ ಪಧಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಐ.ಸಿ.ವೈ.ಯಮ್ ವಲಯ ಅಧ್ಯಕ್ಷರಾಗಿ ಆಯ್ಕೆಯಾದ ಸಂದೇಶ್ ಫೆರಾವೊ ಪ್ರಮಾಣವಚನ ಸ್ವೀಕರಿಸಿದರು.

ಬಳಿಕ ನಡೆದಕಾರ್ಯಕ್ರಮದಲ್ಲಿ ದಿವಂಗತ ಹೆನ್ರಿಡಿಸೋಜ, ಪೆರುವಾಯಿ ಇವರ ಸ್ಮರಣಾರ್ಥವಾಗಿ 2015-16 ನೇ ಸಾಲಿನಲ್ಲಿ ಪಿ.ಯು.ಸಿ ಮತ್ತು ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ಪ್ರಿಯಡಿಸೋಜ, ಫಾತಿಮಾ ವಾಳೆ (ಪಿ.ಯು.ಸಿ.) ಹಾಗೂ ದೀಕ್ಷಿತಡಿಸೋಜ, ಪ್ರಿಯಡಿಸೋಜ, ಜೊಸ್ವಿಲ್ ರಕ್ಷಿತ್‍ಡಿಸೋಜ (ಎಸ್.ಎಸ್.ಎಲ್.ಸಿ) ಇವರನ್ನು ಶ್ರೀಮತಿ ಕ್ರೀಸ್ತಿನ್ ಡಿಸೋಜರವರು ನಗದು ಪುರಸ್ಕಾರ ನೀಡಿ ಸನ್ಮಾನಿಸಿದರು.  ಈ ಸಂದರ್ಭದಲ್ಲಿ ಕುಟುಂಬಸ್ಥರು ಉಪಸ್ಥಿತರಿದ್ದರು.


Spread the love

Exit mobile version