Home Mangalorean News Kannada News ಒಮಾನ್ ಬಿಲ್ಲವಾಸ್ ಕೂಟದಿಂದ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶ್ರೀ ನಾರಾಯಣ ಗುರು ಪೂಜೆ ಆಚರಣೆ

ಒಮಾನ್ ಬಿಲ್ಲವಾಸ್ ಕೂಟದಿಂದ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶ್ರೀ ನಾರಾಯಣ ಗುರು ಪೂಜೆ ಆಚರಣೆ

Spread the love

ಒಮಾನ್ ಬಿಲ್ಲವಾಸ್ ಕೂಟದಿಂದ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶ್ರೀ ನಾರಾಯಣ ಗುರು ಪೂಜೆ ಆಚರಣೆ

ಮಸ್ಕತ್’ನ “ಒಮಾನ್ ಬಿಲ್ಲವಾಸ್” ಕೂಟದಿಂದ ದಿನಾಂಕ 21-09-2018, ಶುಕ್ರವಾರ ರಂದು ದಾರ್ಸೈಟ್ ಶ್ರೀ ಕೃಷ್ಣ ದೇವಸ್ಥಾನದ ವಠಾರದಲ್ಲಿ ಜರುಗಿದ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶ್ರೀ ನಾರಾಯಣ ಗುರು ಪೂಜೆ ಬಹಳ ಅದ್ದೂರಿಯಾಗಿ ನಡೆಯಿತು. ಮಸ್ಕತಿನ ಸರ್ವ ಜಾತಿ ಬಂಧವರು ಭಾಗವಹಿಸಿ, ಭಜನೆ, ಚೆಂಡೆ ವಾದನ, ಮಹಾಪೂಜೆ, ನಂತರ ಮಹಪ್ರಸಾದ ಸ್ವೀಕರಿಸಿ ದೇವರ ಅನುಗ್ರಹಕ್ಕೆ ಪಾತ್ರರದರು.

ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಕಣ್ಮಣ ಸೆಳೆದದ್ದು ವಿಶ್ವ ವಿಖ್ಯಾತ ಮಂಗಳೂರು ದಸರಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತುಳುನಾಡಿನ ಪುಣ್ಯ ಕ್ಷೇತ್ರವಾದ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರವನ್ನು ಹೋಲುವಂತಹ ಶ್ರೀ ನಾರಾಯಣ ಗುರುವರ್ಯರ ಮುಖಮಂಟಪದ ಚಿತ್ರಣ.

ಅದಲ್ಲದೆ ಸಮಾಜ ಮುಖಿ ಕೆಲಸ ಮಾಡುವ ಓಮನ್ ಬಿಲ್ಲವ ಕೂಟ ಕಳೆದ ಜುಲೈ ತಿಂಗಳಲ್ಲಿ ವಾರ್ಷಿಕ ಸ್ಕಾಲರ್ಶಿಪ್ ಕಾರ್ಯಕ್ರಮವನ್ನು ಮಾಡಿ ಸುಮಾರು ನೂರು ಬಡ ವಿಧ್ಯಾರ್ಥಿಗಳಿಗೆ ಸಹಾಯ ಧನ ವಿತರಿಸಲಾಯಿತು. ಮಸ್ಕತಿನ ಸಮುದಾಯ ವ್ಯಕ್ತಿಗಳ ತುರ್ತು ಸ್ಪಂದನೆಯನ್ನು ನೀಡುತ್ತಾ ಬಂದಿದೆ.

ಬರುವ ತಿಂಗಳ ನವರಾತ್ರಿ ಹಬ್ಬದ ಸಮಯದಲ್ಲಿ ಪೂಜಾ ಹಾಗೂ ದಾಂಡ್ಯಯ ನ್ರತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.


Spread the love

Exit mobile version