ಕುಡಿದ ಮತ್ತಿನಲ್ಲಿ ರಸ್ತೆಯ ವೃತ್ತ ಗೋಪುರಕ್ಕೆ ಕಾರು ಡಿಕ್ಕಿ – ಇಬ್ಬರಿಗೆ ಗಾಯ

Spread the love

ಕುಡಿದ ಮತ್ತಿನಲ್ಲಿ ರಸ್ತೆಯ ವೃತ್ತ ಗೋಪುರಕ್ಕೆ ಕಾರು ಡಿಕ್ಕಿ – ಇಬ್ಬರಿಗೆ ಗಾಯ

ಉಡುಪಿ: ಪಾನಮತ್ತರು ಸಂಚರಿಸುತ್ತಿರುವ KA 02 MB 4002.ನೋಂದಣಿ ಸಂಖ್ಯೆಯ ಕಾರೊಂದು ಉಡುಪಿ ಚಿತ್ತರಂಜನ್ ಸರ್ಕಲ್ ಬಳಿ ಇರುವ ವೃತ್ತ ಗೋಪುರಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಸೋಮವಾರ ನಡುರಾತ್ರಿ ನಡೆದಿದೆ.

ಗಾಯಾಳುಗಳನ್ನು ವೇಂಕಟೇಶ ಪ್ರಭು, (47 ವ) ಸಂತೋಷ್ ಶೇಟ್ (42 ವ) ಒಳಕಾಡು ಮೂಲದವರೆಂದು ಎಂದು ಗುರುತಿಸಲಾಗಿದೆ.

ಕಾರಿನಲ್ಲಿ ಐವರು ಸಂಚರಿಸುತ್ತಿದ್ದರು, ಇರ್ವರಿಗೆ ಗಂಭೀರ ಸ್ವರೂಪದ ಗಾಯಾಳುಗಳಾಗಿದ್ದು ಇರ್ವರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು, ರಕ್ಷಿಸಿ ನಗರದ ಆದರ್ಶ ಆಸ್ಪತ್ರೆಗೆ ದಾಖಲುಪಡಿಸಿದ್ದಾರೆ. ಕುಡಿತದ ಅಮಲಿನಲ್ಲಿದ್ದ ಉಳಿದ ಮೂವರು, ಸ್ಥಳದಲ್ಲಿ ಸೇರಿರುವ ಜನರಕಂಡು ಮುಜುಗರದಿಂದಾಗಿ ಗಾಯಾಳು, ಮಿತ್ರರನ್ನು ಬಿಟ್ಟು ಪರಾರಿಯಾದರೆಂದು ತಿಳಿದು ಬಂದಿದೆ.

 ಚಾಲಕ ಪಾನಮತ್ತನಾಗಿ ಅತಿವೇಗದಲ್ಲಿ ಕಾರು ಚಲಾಯಿಸಿದ್ದು, ನಿಯಂತ್ರಣ ಸಿಗದೆ ಅಪಘಾತ ಸಂಭವಿಸಲು ಕಾರಣವೆಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು, ನಗರ ಠಾಣೆ ಪೊಲೀಸರು ಧಾವಿಸಿಬಂದು ಪರಿಶೀಲನೆ ನಡೆಸಿದ್ದಾರೆ.


Spread the love