ಕೃಷ್ಣ ಮಠದ ಕುರಿತು ಫೇಸ್ ಬುಕ್ಕಿನಲ್ಲಿ ನಿಂದನೆ – ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು

Spread the love

ಕೃಷ್ಣ ಮಠದ ಕುರಿತು ಫೇಸ್ ಬುಕ್ಕಿನಲ್ಲಿ ನಿಂದನೆ – ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು

ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಬಗ್ಗೆ ಫೇಸ್ ಬುಕ್ಕಿನಲ್ಲಿ ಅವಹೇಳನಾಕಾರಿಯಾಗಿ ನಿಂದಿಸಿ ಧಾರ್ಮಿಖ ಭಾವನೆಗಳಿಗ ಧಕ್ಕೆ ಉಂಟು ಮಾಡಿರುವ ಕುರಿತು ಉಡುಪಿ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಕುರಿತು ಹಯಗ್ರೀವ ಭಕ್ತವೃಂದ ಸೋದೆ ಮಠದ ಪದಾಧಿಕಾರಿ ಡಾ. ಯು ಯೋಗಿಶ್ ಶೇಟ್ ಠಾಣೆಗೆ ದೂರು ನೀಡಿದ್ದು, ಜುಲೈ 29 ರಂದು ಬೆಳಿಗ್ಗೆ 02:41 ಗಂಟೆಗೆ ಆರೋಪಿತರಾದ ಡಾ/ ಸಂಪತ್ ಕುಮಾರ್ ಕೋಟೇಶ್ವರರವರು ಫೇಸ್ ಬುಕ್‌ನಲ್ಲಿ ದುಡ್ಡಿಗೋಸ್ಕರ ಎರಡೆರಡು ಅಷ್ಟಮಿ ಆಚರಿಸುವ ಉಡುಪಿಯ ಧರ್ಮ  ಪಾಖಂಡಿಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ? ಎಂದು ಪ್ರಚುರ ಪಡಿಸಿದ್ದು ಈ ಕುರಿತು  ಆರೋಪಿತರಿಗೆ ಶ್ರೀಕೃಷ್ಣ ಮಠದ ಭಕ್ತವೃಂದ ಪ್ರತಿಕ್ರಿಯಿಸಿರುವುದಕ್ಕೆ  ಆರೋಪಿತರು ಅವಾಚ್ಯ ಶಬ್ದಗಳಿಂದ ನಿಂದಿಸಿ ಫೇಸ್ ಬುಕ್‌ನಲ್ಲಿ ಪ್ರಚಾರ ಮಾಡಿದ್ದು, ಅಲ್ಲದೇ ಅವರ ಅನುಯಾಯಿಗಳಾದ ಆರೋಪಿತರಾದ ಐಶು ಭಟ್, ಐಶ್ವರ್ಯ ಶೆಟ್ಟಿ ಮತ್ತು ಲಕ್ಷ್ಮೀ ಕೆ ರಾವ್ ಎಂಬವರು ಜುಲೈ 29 ರ ರಾತ್ರಿ 9:12 ಕ್ಕೆ ಮತ್ತು ದಿನಾಂಕ 30  ರಂದು  ಶ್ರೀಕೃಷ್ಣ ಮಠದ ಬಗ್ಗೆ ಅವಹೇಳನಕಾರಿಯಾಗಿ ಫೇಸ್ ಬುಕ್‌ನಲ್ಲಿ ಪ್ರಚುರ ವಹಿಸಿ ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟು ಮಾಡಿರುವುದಾಗಿದೆ ಎಂದ ದೂರಿನಲಲ್ಲಿ ತಿಳಿಸಿದ್ದಾರೆ.

ಉಡುಪಿ ನಗರ ಠಾಣೆಯ ಪೋಲಿಸರು ಪ್ರಕರಣದ ದಾಖಲಿಸಿದ್ದಾರೆ.


Spread the love