Home Mangalorean News Kannada News ಚೇರ್ಕಾಡಿಯಲ್ಲಿ ಬಸ್ -ಸ್ಕೂಟಿ ಡಿಕ್ಕಿ ಇಬ್ಬರು ಸವಾರರ ಸಾವು

ಚೇರ್ಕಾಡಿಯಲ್ಲಿ ಬಸ್ -ಸ್ಕೂಟಿ ಡಿಕ್ಕಿ ಇಬ್ಬರು ಸವಾರರ ಸಾವು

Spread the love

ಚೇರ್ಕಾಡಿಯಲ್ಲಿ ಬಸ್ -ಸ್ಕೂಟಿ ಡಿಕ್ಕಿ ಇಬ್ಬರು ಸವಾರರ ಸಾವು

ಉಡುಪಿ: ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಕೂಟಿ ಸವಾರರು ಮೃತಪಟ್ಟ ಘಟನೆ ಚೇರ್ಕಾಡಿ ಗ್ರಾಮದ ಮುಂಡ್ಕಿನಜೆಡ್ಡು ಎಂಬಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.

ಮೃತರನ್ನು ಸ್ಕೂಟಿ ಸವಾರರಾದ ಅಲುಂಜೆಯ ಅನಿಲ್ ಕುಲಾಲ್ (32) ಮತ್ತು ಸಹ ಸವಾರ ಭಾಸ್ಕರ ಕುಲಾಲ್ (55) ಎಂದು ಗುರುತಿಸಲಾಗಿದೆ.

ಮೃತರು ಸ್ಕೂಟಿಯಲ್ಲಿ ಕುಂಜಾಲು ಕಡೆಗೆ ಹೋಗುತ್ತಿದ್ದ ವೇಳೆ ಕುಂಜಾಲು ಕಡೆಯಿಂದ ಪೇತ್ರಿ ಕಡೆಗೆ ಬರುತ್ತಿದ್ದ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ಇಬ್ಬರು ರಸ್ತೆಗೆ ಎಸೆಯಲ್ಪಟ್ಟು, ಇದರಿಂದ ಗಂಭೀರ ಗಾಯಗೊಂಡ ಇಬ್ಬರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದುಕೊಣಡು ಹೋಗುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಮೃತ ಅನಿಲ್ ಪತ್ನಿ ಹಾಗೂ ಒಂದುವರೆ ತಿಂಗಳ ಮಗು ಮತ್ತು ಭಾ್ಸ್ಕರ್ ಪತ್ನಿ ಹಾಗೂ ಒರ್ವ ಪುತ್ರನ್ನನ್ನು ಅಗಲಿದ್ದಾಎ.

ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version