Home Mangalorean News Kannada News ಜೂ 7: ವಿರಳ ಜನ ಸಂಚಾರ ಹಿನ್ನಲೆ, ಉಡುಪಿಯಲ್ಲಿ ಸಿಟಿ ಬಸ್ ಸಂಚಾರ ಇಲ್ಲ

ಜೂ 7: ವಿರಳ ಜನ ಸಂಚಾರ ಹಿನ್ನಲೆ, ಉಡುಪಿಯಲ್ಲಿ ಸಿಟಿ ಬಸ್ ಸಂಚಾರ ಇಲ್ಲ

Spread the love

ಜೂ 7: ವಿರಳ ಜನ ಸಂಚಾರ ಹಿನ್ನಲೆ, ಉಡುಪಿಯಲ್ಲಿ ಸಿಟಿ ಬಸ್ ಸಂಚಾರ ಇಲ್ಲ

ಉಡುಪಿ: ಭಾನುವಾರ ಜನ ಸಂಚಾರ ವಿರಳ ಹಿನ್ನಲೆಯಲ್ಲಿ ಉಡುಪಿಯಲ್ಲಿ ಜೂನ್ 7 ರಂದು ಸಿಟಿ ಬಸ್ ಒಡಾಟ ಮಾಡುವುದಿಲ್ಲ ಎಂದು ಸಿಟಿ ಬಸ್ ಮ್ಹಾಲಕರ ಸಂಘದ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಕಳೆದ ಒಂದು ವಾರದಿಂದ ಉಡುಪಿ ನಗರ ವ್ಯಾಪ್ತಿಯಲ್ಲಿ ಒಟ್ಟು 23 ಬಸ್ಸುಗಳು ಸರಕಾರದ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಂಡ ಒಡಾಟ ನಡೆಸಿದ್ದವು. ಭಾನುವಾರಗಳಲ್ಲಿ ಕಳೆದ ಹಲವು ವಾರಗಳಿಂದ ಜನರು ಸಂಚಾರವನ್ನು ಕಡಿಮೆ ಮಾಡಿರುವುದರಿಂದ, ಬಸ್ಸುಗಳಲ್ಲಿ ಕೂಡ ಪ್ರಯಾಣಿಕರು ವಿರಳವಾಗಿರುವ ಕಾರಣ ಜೂ 7 ರಂದು ಭಾನುವಾರ ಸಿಟಿ ಬಸ್ ಗಳನ್ನು ಬಂದ್ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.


Spread the love

Exit mobile version