ತೆಂಕನಿಡಿಯೂರಿನಲ್ಲಿ ಗಾಳಿ ಮಳೆಯಿಂದಾಗಿ ರಸ್ತೆಗೆ ಅಡ್ಡಲಾಗಿ ಬಿದ್ದ ಕಂಬಗಳ ತೆರವು

Spread the love

ತೆಂಕನಿಡಿಯೂರಿನಲ್ಲಿ ಗಾಳಿ ಮಳೆಯಿಂದಾಗಿ ರಸ್ತೆಗೆ ಅಡ್ಡಲಾಗಿ ಬಿದ್ದ ಕಂಬಗಳ ತೆರವು

ಉಡುಪಿ: ತೆಂಕನಿಡಿಯೂರು ಗ್ರಾಮದ ಈಶ್ವರನಗರ ಮತ್ತು ಲಕ್ಷ್ಮೀ ನಗರ ವಾರ್ಡ್ ನ ಹಲವು ಕಡೆ ಗಾಳಿ ಮಳೆಯಿಂದಾಗಿ ಮರ ಬಿದ್ದು ವಿದ್ಯುತ್ ಕಂಬಗಳು ಬಿದ್ದು ಮುಖ್ಯ ರಸ್ತೆ ಸಂಚಾರಕ್ಕೆ ತೊಡಕಾಗಿ ವಾಹನ ಸಂಚಾರಕ್ಕೆ ತೊಡಕಾಗಿದ್ದು ಪಂಚಾಯತ್ ಅಧ್ಯಕ್ಷರು, ಸದಸ್ಯರುಗಳು ಮೆಸ್ಕಾಂ ಇಲಾಖೆಯ ಸಹಕಾರದೊಂದಿಗೆ ಸುಗಮ ಸಂಚಾರಕ್ಕೆ ವ್ಯವಸ್ಥೆಗೊಳಿಸಲಾಯಿತು.

ಪಂಚಾಯತ್ ಅಧ್ಯಕ್ಷರಾದ ಶೋಭಾ ಡಿ ನಾಯಕ್, ಪಂಚಾಯತ್ ಅಭಿವೃದ್ಧಿೆ ಅಧಿಕಾರಿ ದಯಾನಂದ ಸದಸ್ಯರಾದ ಪ್ರಖ್ಯಾತ್ ಶೆಟ್ಟಿ, ಸತೀಶ್ ನಾಯಕ್, ಪ್ರಥ್ವಿರಾಜ್ ಶೆಟ್ಟಿ, ವೆಂಕಟೇಶ್ ಕುಲಾಲ್, ರವಿರಾಜ್ ಲಕ್ಷ್ಮೀ ನಗರ, ಶರತ್ ಶೆಟ್ಟಿ, ಸುರೇಶ್ಗ ನಾಯಕ್ ಮೀನಾ ಪಿಂಟೊ, ಮಂಜುನಾಥ್ ಅನುಷಾ ಆಚಾರ್ಯ, ವಿನಯ, ಸಿಂಪ್ರಿಯಾ ಹಾಗೂ ಮಾಜಿ ತಾಲೂಕು ಪಂಚಾಯತ್ ಸದಸ್ಯ ಧನಂಜಯ್ ಕುಂದರ್ ಈ ವೇಳೆ ಉಪಸ್ಥಿತರಿದ್ದರು.


Spread the love