ನದಿಯಲ್ಲಿ ಬಟ್ಟೆ ಒಗೆಯುತ್ತಿದ್ದ ವೇಳೆ ಸಿಡಿಲು ಬಡಿದು ಮೂವರ ಸಾವು

Spread the love

ನದಿಯಲ್ಲಿ ಬಟ್ಟೆ ಒಗೆಯುತ್ತಿದ್ದ ವೇಳೆ ಸಿಡಿಲು ಬಡಿದು ಮೂವರ ಸಾವು

ಬಂಟ್ವಾಳ: ನದಿಯಲ್ಲಿ ಬಟ್ಟೆ ಒಗೆಯಲು ತೆರಳಿದ್ದ ವೇಳೆ ಸಿಡಿಲು ಬಡಿದ ಪರಿಣಾಮ ಇಬ್ಬರು ಮಹಿಳೆಯರು ಮತ್ತು ಮಗುವೊಂದು ಮೃತಪಟ್ಟ ಘಟನೆ ಬಂಟ್ವಾಳದ ಜಕ್ರಿ ಬೆಟ್ಟು ಎಂಬಲ್ಲಿ ಬುಧವಾರ ನಡೆದಿದೆ.

ಮೃತರನ್ನು ತುಮಕೂರು ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡ ಹಳ್ಳಿ ಹೊಬಳಿ ಜಾಗರೆ ನಿವಾಸಿಗಳಾದ ಹನುಮಕ್ಕ, ಮತ್ತು ಜಯಮ್ಮ ಎಂದು ಗುರುತಿಸಲಾಗಿದೆ.

ಮೃತರು ಬಂಟ್ವಾಳ ಪುರಸಭಾ ವ್ಯಾಪ್ತಿಯ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾರ್ಮಿಕರಾಗಿದ್ದು, ಬುಧವಾರ ಬಟ್ಟೆಒಗೆಯಲು ನದಿ ತೀರಕ್ಕೆ ಹೋಗಿದ್ದು, ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲೇ ಸಾವನಪ್ಪಿದ್ದು, ಅಸ್ವಸ್ಥಗೊಂಡಿದ್ದ ಮಗು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತಪಟ್ಟಿದೆ ಎನ್ನಲಾಗಿದೆ.


Spread the love