Home Mangalorean News Kannada News ನೆರೆಮನೆಯ ಚಿನ್ನಾಭರಣಗಳ ಕಳ್ಳತನ – ಇಬ್ಬರ ಬಂಧನ

ನೆರೆಮನೆಯ ಚಿನ್ನಾಭರಣಗಳ ಕಳ್ಳತನ – ಇಬ್ಬರ ಬಂಧನ

Spread the love
RedditLinkedinYoutubeEmailFacebook MessengerTelegramWhatsapp

ನೆರೆಮನೆಯ ಚಿನ್ನಾಭರಣಗಳ ಕಳ್ಳತನ – ಇಬ್ಬರ ಬಂಧನ

ಮೂಲ್ಕಿ: ನೆರೆಮನೆಯಲ್ಲಿಯೆ ಕಳ್ಳತನ ಮಾಡಿದ ಇಬ್ಬರನ್ನು ಬಂಧಿಸುವಲ್ಲಿ ಮೂಲ್ಕಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಮುಲ್ಕಿ ಕೆ.ಎಸ್.ರಾವ್.ನಗರದ ಲಿಂಗಪ್ಪಯ್ಯಕಾಡು ನಿವಾಸಿಗಳಾದ ಮೋಹನ್ರಾಜ್ (20) ಮತ್ತು ಮಂಜುನಾಥ ಮಾಳಗಿ (39) ಎಂದು ಗುರುತಿಸಲಾಗಿದೆ

ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಎಸ್.ರಾವ್.ನಗರದ ಲಿಂಗಪ್ಪಯ್ಯಕಾಡು ನಿವಾಸಿ ಮನೆಯ ಕಪಾಟಿನಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳರು ಕಳವು ಮಾಡಿದ ಬಗ್ಗೆ ಮೂಲ್ಕಿ ಠಾಣೆಯಲ್ಲಿ ದೂರು ನೀಡಿದ್ದರು.
ಈ ಕುರಿತು ಕಾರ್ಯಾಚರಣೆ ನಡೆಸಿದ ಮೂಲ್ಕಿ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಕಳ್ಳತನ ನಡೆಸಿದ ವಿಚಾರ ಬೆಳಕಿಗೆ ಬಂದಿದ್ದು ಬಂಧಿತರಿಂದ 36 ಗ್ರಾಂ ತೂಕದ 1.60 ಲಕ್ಷರೂ. ವೆಚ್ಚದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿದ್ದಾರೆ.


Spread the love
RedditLinkedinYoutubeEmailFacebook MessengerTelegramWhatsapp

Exit mobile version