Home Mangalorean News Kannada News ಪಂಚಾಯತ್ ಕಚೇರಿಯಲ್ಲೇ ಪಿಡಿಓ ರಾಸಲೀಲೆ; ಕ್ರಮಕ್ಕೆ ಸಮತಾ ಸೈನಿಕಾ ದಳ ಒತ್ತಾಯ

ಪಂಚಾಯತ್ ಕಚೇರಿಯಲ್ಲೇ ಪಿಡಿಓ ರಾಸಲೀಲೆ; ಕ್ರಮಕ್ಕೆ ಸಮತಾ ಸೈನಿಕಾ ದಳ ಒತ್ತಾಯ

Spread the love

ಪಂಚಾಯತ್ ಕಚೇರಿಯಲ್ಲೇ ಪಿಡಿಓ ರಾಸಲೀಲೆ; ಕ್ರಮಕ್ಕೆ ಸಮತಾ ಸೈನಿಕಾ ದಳ ಒತ್ತಾಯ

ಕುಂದಾಪುರ: ಉಡುಪಿಯ ಕುಂದಾಪುರ ತಾಲೂಕಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿವೊಬ್ಬನ ರಾಸಲೀಲೆ ಪ್ರಕರಣವೊಂದು ಬಯಲಾಗಿದೆ.ಕುಂದಾಪುರ ತಾಲೂಕಿನ ನಾಲ್ಕೂರು ಗ್ರಾಮ ಪಂಚಾಯತ್ ಪಿಡಿಓ ಅನಂತ ಪದ್ಮನಾಭ್ ನಾಯಕ್ ಮಹಿಳಾ ಸಿಬ್ಬಂದಿಯ ಜೊತೆ ರಾಸಲೀಲೆ ನಡೆಸಿದ ದೃಶ್ಯಗಳು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ.

ಅನಂತ ಪದ್ಮನಾಭ ನಾಯಕ್ ಒಂದು ವರುಷದಿಂದ ನಾಲ್ಕೂರು ಗ್ರಾಮ ಪಂಚಾಯತ್ ನಲ್ಲಿ ಪಿಡಿಓ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಕರ್ತವ್ಯದ ವೇಳೆ ಸರ್ಕಾರಿ ಕಚೇರಿಯಲ್ಲೆ ಕಾಮದಾಟ ನಡೆಸಿರುವುದು ಬೆಳಕಿಗೆ ಬಂದಿದೆ. ಗ್ರಾಮ ಪಂಚಾಯತ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಿವಾಹಿತ ಯುವತಿಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿದ್ದು ಪಿಡಿಓ ನ ಕಾಮದಾಟಕ್ಕೆ ಪಂಚಾಯತ್ ಸಿಬ್ಬಂದಿಯನ್ನೇ ಬಳಸಿಕೊಂಡಿದ್ದಾನೆ.

ಪಂಚಾಯತ್ ಕಚೇರಿಯಲ್ಲೇ ಸಾಯಂಕಾಲ ಕೆಲಸ ಮುಗಿಯುತ್ತಿದ್ದಂತೆ ಪಿಡಿಓ ಈ ಅವಿವಾಹಿತ ಯುವತಿಯನ್ನು ಪುಸಲಾಯಿಸಿ ಸಲ್ಲಾಪಕ್ಕೆ ಇಳಿಯುತ್ತಿದ್ದ ಎನ್ನಲಾಗಿದೆ. ಈ ಗುಮಾನಿಯಿಂದಲೇ ರಹಸ್ಯ ಅಳವಡಿಸಲಾಗಿದ್ದು, ಕ್ಯಾಮೆರಾದಲ್ಲಿ ಆತನ ನೀಚಕೃತ್ಯ ಬಯಲಾಗಿದೆ. ಸುಮಾರು 10 ನಿಮಿಷಗಳ ಕಾಲ ರಾಸಲೀಲೆ ನಡೆಸಿರುವುದು ದಾಖಲಾಗಿದೆ.

ಮಹಿಳಾ ಸಿಬ್ಬಂದಿಯ ಜೊತೆ ಅಸಭ್ಯ ವರ್ತನೆ ನಡೆಸಿರುವುದಲ್ಲದೇ ಕಾನೂನು ಬಾಹಿರ ಚಟುವಟಿಕೆ,ಭ್ರಷ್ಟಚಾರದಲ್ಲಿ ಭಾಗಿಯಾಗಿರುವ ಆರೋಪ ಕೂಡ ಈತನ ಮೇಲಿದೆ.ಎಕ್ಸ್ ಮಿಲಿಟರಿ ಅಫೀಸರ್ ಅಗಿರುವ ಈತ ಸರ್ಕಾರಿ ಕಚೇರಿಯಲ್ಲಿ ಯುವತಿಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿರುವು ಸಮತಾ ಸೈನಿಕ ದಳ ಖಂಡಿಸಿದೆ.

ಪಿಡಿಓ ಅನಂತ ಪದ್ಮನಾಭ ನಾಯಕ್ ವಿರುದ್ಧ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದೆ. ಪಿಡಿಓ ವಿರುದ್ಧ ಅತ್ಯಾಚಾರ ಹಾಗೂ ಕರ್ತವ್ಯ ಲೋಪ ನಡೆಸಿರುವ ಆರೋಪವಿರುವುದರಿಂದ ಶಿಸ್ತು ಕ್ರಮ ಕೈಗೊಂಡು ಕೆಲಸದಿಂದ ವಜಾ ಮಾಡಬೇಕು ಎಂದು ಸಮತಾ ಸೈನಿಕ ದಳ ಒತ್ತಾಯಿಸಿದೆ.


Spread the love

Exit mobile version