Home Mangalorean News Kannada News ಪರಿಚಯಸ್ಥ ಮಹಿಳೆಯೊಂದಿಗೆ ಮಾತನಾಡಿದ್ದಕ್ಕೆ ತಂಡದಿಂದ   ಹಲ್ಲೆ ನಾಲ್ವರ ಬಂಧನ

ಪರಿಚಯಸ್ಥ ಮಹಿಳೆಯೊಂದಿಗೆ ಮಾತನಾಡಿದ್ದಕ್ಕೆ ತಂಡದಿಂದ   ಹಲ್ಲೆ ನಾಲ್ವರ ಬಂಧನ

Spread the love

ಪರಿಚಯಸ್ಥ ಮಹಿಳೆಯೊಂದಿಗೆ ಮಾತನಾಡಿದ್ದಕ್ಕೆ ತಂಡದಿಂದ   ಹಲ್ಲೆ ನಾಲ್ವರ ಬಂಧನ

ಬಂಟ್ವಾಳ : ಪರಿಚಯಸ್ಥ ಮಹಿಳೆಯೊಂದಿಗೆ ಮಾತನಾಡಿದ್ದಕ್ಕೆ ಗುಂಪೊಂದು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಠಾಣಾ ಪೋಲಿಸರು ನಾಲ್ವರನ್ನು ಬಂಧಿಸಿದ್ದಾರೆ.

ಬಂಧೀತರನ್ನು ಫರಂಗೀಪೆಟೆ ನೀವಸಾಇ ಉಮ್ಮರ್ ಫಾರೂಕ್(36), ಮೊಹಮ್ಮದ್ ಅಫ್ರಿದ್ (21), ಅರ್ಫಾತ್ (28) ಮತ್ತು ಮೊಹಮ್ಮದ್ ಇಕ್ಬಾಲ್ (32) ಎಂದು ಗುರುತಿಸಲಾಗಿದೆ.

ಜುಲೈ 29ರಂದು ಪರಂಗೀಪೇಟೆ ಬಳಿ ಉಡುಪಿ ಕೋಟದ ನಿವಾಸಿಯಾದ ಸುರೇಶ ರವರು ತಮ್ಮ ಕಾರಿ ನಲ್ಲಿ ಕೆಲಸ ನಿಮಿತ್ತ ಬಂಟ್ವಾಳದಿಂದ ಮಂಗಳೂರಿಗೆ ತೆರಳುತ್ತಿದ್ದಾಗ ಪರಂಗಿಪೇಟೆಯ ಬಸ್ ನಿಲ್ದಾಣದ ಬಳಿ 3.00 ಗಂಟೆ ಸಮಯಕ್ಕೆ ತಮಗೆ ಪರಿಚಯದ ಮಹಿಳೆಯೊಬ್ಬರನ್ನು ನೋಡಿ ಕಾರು ನಿಲ್ಲಿಸಿ ಮಾತನಾಡಿ ಅಲ್ಲಿಂದ ಹೊರಡುವಾಗ ಸುಮಾರು 8 ರಿಂದ 10 ಜನ ಯುವಕರು ಕಾರನ್ನು ಅಡ್ಡಗಟ್ಟಿ ಸದರಿ ಸುರೇಶ್ ರವರಿಗೆ ನಿನೇನು ಅವರ ಬಳಿ ಮಾತನಾಡೊದು ಎಂದು ಹೇಳಿ ಅವಾಚ್ಯ ಶಬ್ದ ಗಳಿಂದ ಬಯ್ದು,ಕೈ ಯಿಂದ ಹೊಡೆದು ಹಲ್ಲೆ ಮಾಡಿರುತ್ತಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಗ್ರಾಮಾಂತರ ಠಾಣೆಯ ಪೋಲಿಸರು ಅಲ್ಲಿ ಸೇರಿದ್ದ ಗುಂಪನ್ನು ಚದುರಿಸಿ ಸುರೇಶ್ ಅವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಕುರಿತಂತೆ ಸುರೇಶ್ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅದರಂತೆ ನಾಲ್ಕು ಮಂದಿಯನ್ನು ಬಂಧಿಸಿದ್ದು, ಉಳಿದ ಆರೊಪಿಗಳ ಬಗ್ಗೆ ಮಾಹಿತಿ ಇದ್ದು ಶೀಘ್ರವಾಗಿ ಬಂದಿಸಲಾಗುವುದು ಎಂದು ತಿಳಿಸಿದ್ದಾರೆ.


Spread the love

Exit mobile version