ಪ್ರಮೋದ್ ಮಧ್ವರಾಜ್ ಅವರಿಗೆ ಬಿಜೆಪಿಯ ಗೇಟ್ ಓಪನ್ ಆಗಿದೆ – ರಘುಪತಿ ಭಟ್

Spread the love

ಪ್ರಮೋದ್ ಮಧ್ವರಾಜ್ ಅವರಿಗೆ ಬಿಜೆಪಿಯ ಗೇಟ್ ಓಪನ್ ಆಗಿದೆ – ರಘುಪತಿ ಭಟ್

ಉಡುಪಿ: ಪ್ರಮೋದ್ ಮಧ್ವರಾಜ್ ಭಾರತೀಯ ಜನತಾ ಪಕ್ಷಕ್ಕೆ ಬರುವುದಿದ್ದಲ್ಲಿ ಪ್ರೀತಿಯ ಸ್ವಾಗತವಿದೆ ಆದರೆ ಅವರು ಮಲ್ಪೆ ಬೂತ್ ನಿಂದ ಅರ್ಜಿ ಹಾಕಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಅವರು ಉಡುಪಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಪ್ರಮೋದ್ ಮಧ್ವರಾಜ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ ಎನ್ನುವುದು ವೀರಪ್ಪ ಮೊಯ್ಲಿ ಹೇಳಿದ ಬಳಿಕ ಸ್ಪಷ್ಟವಾಗಿದೆ. ಅದರ ಬಳಿಕ ಪ್ರಮೋದ್ ಜೆಡಿಎಸ್ ಪಕ್ಷಕ್ಕೆ ಅಧಿಕೃತ ರಾಜೀನಾಮೆ ನೀಡಿದ್ದಾರೆ. ಈಗ ಅವರು ಬಿಜೆಪಿ ಪಕ್ಷಕ್ಕೆ ಸೇರಲು ಮನಸಿದ್ದರೆ ಅವರು ಅರ್ಜಿ ಹಾಕಿದರೆ ಪಕ್ಷ ಪರಿಗಣಿಸಬಹುದು. ಅವರನ್ನು ಪಕ್ಷಕ್ಕೆ ಸೇರಿಸುವುದರ ಕುರಿತು ಪಕ್ಷ, ರಾಜ್ಯ, ಕೇಂದ್ರ, ಜಿಲ್ಲೆ ಎಲ್ಲರೂ ಸೇರಿ ತೀರ್ಮಾನ ಮಾಡುತ್ತಾರೆ. ಆದರೆ ಸದ್ಯಕ್ಕೆ ಅವರಿಂದ ಯಾವುದೇ ಅರ್ಜಿ ಬಂದಿಲ್ಲ. ಹಿಂದೊಮ್ಮೆ ಅರ್ಜಿ ಹಾಕಿದ್ದರು ಆಗ ಬಿಜೆಪಿ ಗೇಟ್ ಹಾಕಿದೆ ಎಂದು ಹೇಳಿ ವಾಪಾಸಾಗಿದ್ದರು. ಆದರೆ ಈಗ ಅರ್ಜಿ ಹಾಕಿದ್ರೆ ಗೇಟ್ ಒಪನ್ ಇದೆ ಹಾಗಾಗಿ ಅವರು ಬಿಜೆಪಿಗೆ ಬಂದರೆ ಯಾವುದೇ ತೊಂದರೆ ಇಲ್ಲ. ಅವರು ಬಿಜೆಪಿಗೆ ಬರಲು ಮಲ್ಪೆ ಬೂತಿನಿಂದ ಅರ್ಜಿ ಹಾಕಬೇಕು ಆಗ ಆ ಬೂತಿನ ಬಿಜೆಪಿ ನಾಯಕರು ತೀರ್ಮಾನ ಮಾಡುತ್ತಾರೆ ಎಂದು ವ್ಯಂಗ್ಯದಲ್ಲೆ ಬಿಜೇಪಿಗೆ ಆಹ್ವಾನಿಸಿದರು.

ಪ್ರಮೋದ್ ಮಧ್ವರಾಜ್ ಬಗ್ಗೆ ನಾವು ಮೊದಲೇ ಭವಿಷ್ಯ ಹೇಳಿದ್ದೇವು. ಲೋಕಸಭಾ ಚುನಾವಣೆಯಲ್ಲಿ ಅವರು ಸೋಲುತ್ತಾರೆ ಅದೇ ವೇಳೆ ರಾಜ್ಯದಲ್ಲಿ ಮೈತ್ರಿ ಸರ್ಕಾರವೂ ಪತನವಾಗುತ್ತದೆ. ಅದರ ಬಳಿಕ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಕೂಡ ಬಿದ್ದು ಹೋಗುತ್ತದೆ ಎಂದು ಹೇಳಿದ್ದೆವು ಅದೇ ರೀತಿ ಈಗ ಆಗಿದೆ. ಜೆ ಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬಳಿಕ ಇನ್ನೂ ಕೂಡ ಕಾಂಗ್ರೆಸ್ ನಲ್ಲಿ ಪ್ರಮೋದ್ ಗೆ ಎಂಟ್ರಿ ಕೊಟ್ಟಿಲ್ಲ ಮುಂದೆನಾಗುತ್ತೆ ಕಾದು ನೋಡೊಣ ಎಂದರು.


Spread the love