Home Mangalorean News Kannada News ಬಂಟ್ವಾಳ: ಸಿಡಿಲು ಬಡಿತಕ್ಕೆ ಬಾಲಕ ಬಲಿ

ಬಂಟ್ವಾಳ: ಸಿಡಿಲು ಬಡಿತಕ್ಕೆ ಬಾಲಕ ಬಲಿ

Spread the love

ಬಂಟ್ವಾಳ: ಸೋಮವಾರ ಸಂಜೆ ಬಂಟ್ವಾಳ ಪಾಣೆಮಂಗಳೂರಿನಲ್ಲಿ ಸಿಡಿಲ ಹೊಡೆತಕ್ಕೆ ಬಾಲಕನೋರ್ವ ಮೃತಪಟ್ಟ ಘಟನೆ ವರದಿಯಾಗಿದೆ.

ಮೃತ ಬಾಲಕನ್ನು ಪಾಣೆಮಂಗಳೂರು ಆಲಡ್ಕ ನಿವಾಸಿಗಳಾದ ಯೂಸುಫ್ ಹಾಗೂ ಖದೀಜಮ್ಮ ರವರ ಪುತ್ರ ಅಬೂಬಕರ್ ಸಿದ್ದೀಖ್(16) ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆಯ ಸುಮಾರಿಗೆ ಬಲವಾದ ಗಾಳಿ ಮಳೆ ಸಿಡಿಲು ಬರುತ್ತಿದ್ದ ವೇಳೆ ಬಾಲಕ ಮಾವಿನ ಮರದಡಿ ನಿಂತಿದ್ದು ಈ ವೇಳೆ ಸಿಡಿಲು ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಹಲವಾರು ವರ್ಷಗಳಿಂದ ಮೃತ ಬಾಲಕನ ತಂದೆ ತಾಯಿಗಳಿಬ್ಬರೂ ತೀವ್ರವಾದ ಅನಾರೋಗ್ಯದಲ್ಲಿದ್ದು ಈಗ ತಮ್ಮ ಕೊನೆಯ ಪುತ್ರನನ್ನು ಕಳೆದುಕೊಂಡು ದುಃಖತಪ್ತರಾಗಿದ್ದಾರೆ
ಮೃತರು ತಂದೆ, ತಾಯಿ ಹಾಗೂ ಮೂವರು ಸಹೋದರರನ್ನು ಅಗಲಿದ್ದಾರೆ.
ಮೃತರ ಮನೆಗೆ ಬಂಟ್ವಾಳ ತಹಶೀಲ್ದಾರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

 


Spread the love

Exit mobile version