Home Mangalorean News Kannada News ಬಂಧನದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಗಾಂಜಾ ಆರೋಪಿ – ಗುಂಡಿಕ್ಕಿ ಬಂಧಿಸಿದ ಅತ್ತಿಬೆಲೆ ಪೊಲೀಸರು

ಬಂಧನದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಗಾಂಜಾ ಆರೋಪಿ – ಗುಂಡಿಕ್ಕಿ ಬಂಧಿಸಿದ ಅತ್ತಿಬೆಲೆ ಪೊಲೀಸರು

Spread the love

ಬಂಧನದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಗಾಂಜಾ ಆರೋಪಿ – ಗುಂಡಿಕ್ಕಿ ಬಂಧಿಸಿದ ಅತ್ತಿಬೆಲೆ ಪೊಲೀಸರು

ಬೆಂಗಳೂರು: ವಿವಿಧ ಗಾಂಜಾ ಸಾಗಾಟ ಪ್ರಕರಣಗಳಲ್ಲಿ ಭಾಗಿಯಾದ್ದ ವ್ಯಕ್ತಿಯನ್ನು ಅತ್ತಿಬೆಲೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಅಯೂಬ್ ಖಾನ್ ಯಾನೆ ಇಸ್ಮಾಯಿಲ್ ಖಾನ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ 8 ಕ್ಕೂ ಅಧಿಕ ಅಕ್ರಮ ಗಾಂಜಾ ಸಾಗಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಮಂಗಳವಾರ ಕೂಡ ಅತ್ತಿಬೆಲೆ ಸಿಪಿಐ ಸತೀಶ್ ಮತ್ತು ತಂಡ ಆತನನ್ನ ಬಂಧಿಸಲು ತೆರಳಿದ ವೇಳೆ ಸತೀಶ್ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು ಈ ವೇಳೆ ಸತೀಶ್ ಆಯೂಬ್ ಖಾನ್ ಗೆ ತನ್ನ ಪಿಸ್ತೂಲಿನಿಂದ ಕಾಲಿಗೆ ಗುಂಡಿಕ್ಕುವ ಮೂಲಕ ಬಂಧಿಸಿದ್ದಾರೆ.

ಈ ವೇಳೆ ಆಯೂಬ್ ಕಾಲಿಗೆ ಗಾಯವಾಗಿದ್ದು, ಆನೆಕಲ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಸರ್ಜಾಪುರ ಪಿಎಸ್ ಐ ಹರೀಶ್ ರೆಡ್ಡಿ ಅವರಿಗೂ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version