ಬಕ್ರೀದ್ ನಲ್ಲಿ ಗಿಡ ನೆಟ್ಟು ಸೌಹಾರ್ದತೆ ಸಂದೇಶ

Spread the love

ಬಕ್ರೀದ್ ನಲ್ಲಿ ಗಿಡ ನೆಟ್ಟು ಸೌಹಾರ್ದತೆ ಸಂದೇಶ

ಮೈಸೂರು: ಬಕ್ರೀದ್ ಹಬ್ಬದ ಅಂಗವಾಗಿ ನರಸಿಂಹರಾಜ ಕ್ಷೇತ್ರದಲ್ಲಿರುವ ವಾರ್ಡ್ ನಂ.35ರ ತ್ರಿವೇಣಿ ವೃತ್ತದಲ್ಲಿ ತ್ರಿವೇಣಿ ಗೆಳೆಯರ ಬಳಗದ ವತಿಯಿಂದ ಹಿಂದೂ ಮುಸಲ್ಮಾನರು ಜತೆಗೂಡಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ನಾವೆಲ್ಲ ಒಂದು ಎಂಬ ಸಂದೇಶ ಸಾರಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಬಿ.ಆನಂದ್, ಇತಿಹಾಸದಲ್ಲಿ ಎರಡು ಸಮುದಾಯಗಳ ಹಬ್ಬಗಳು ಬಂದರೆ ಸೌಹಾದವಾಗಿ ಆಚರಣೆ ಮಾಡುವ ಪದ್ಧತಿ ನಮ್ಮ ನಾಡಿನಲ್ಲಿದೆ. ಆದರೆ, ಕೆಲವು ಕಿಡಿಗೇಡಿಗಳಿಂದ ಎರಡು ಸಮಾಜದಲ್ಲಿ ಶಾಂತಿ ಕದಡುವ ಯತ್ನಗಳು ನಡೆಯುತ್ತಿವೆ. ಹೀಗಾಗಿ ಎರಡು ಸಮುದಾಯದ ಮುಖಂಡರು ಈ ಬಗ್ಗೆ ಲಕ್ಷ್ಯ ವಹಿಸಿ ಹಬ್ಬಗಳನ್ನು ಆಚರಣೆ ಮಾಡಲು ಮುಂದಾಗಬೇಕು. ಈ ದಿನ ಈ ಯುವಕರು ಒಟ್ಟಾಗಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುತ್ತಾ ಬಂದಿರುವುದು ಬಹಳ ಸಂತಸದ ವಿಚಾರ. ಇದೇ ರೀತಿ ಸೌಹಾರ್ದತೆ ಆಚರಣೆ ಪ್ರತಿ ಜಿಲ್ಲೆಯಲ್ಲಿ ಆದರೆ ಬಹಳ ಉತ್ತಮ ಬೆಳವಣಿಗೆ ರಾಜ್ಯದಲ್ಲಿ ಕಾಣಲು ಸಾಧ್ಯವಿದೆ ಎಂದರು.

ಮುಸಲ್ಮಾನ್ ಸಮುದಾಯದ ಯುವ ಮುಖಂಡ ಅಫ್ತಾಬ್ ಅಹಮದ್ ತ್ಯಾಗ ಮತ್ತು ಬಲಿದಾನದ ಹಬ್ಬವೆಂದೇ ಕರೆಯಲಾಗುವ ಮುಸಲ್ಮಾನರ ಪವಿತ್ರಹಬ್ಬ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂದವರು ಉತ್ಸಾಹ ಮತ್ತು ಕುಟುಂಬದ ಸದಸ್ಯರೊಂದಿಗೆ ಭಾಂದವ್ಯ ಬೆರೆತು ಆಚರಿಸುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ವಾರ್ಡ್ ಅಧಕ್ಷ ಬಸವರಾಜು ಮಸಳ್ಳಿ, ಪ್ರಭಣ್ಣ, ಮಣಿರತ್ನಂ, ಕಿರಣ್, ಗೋವಿಂದ, ಮಹೇಶ್, ಅಫ್ತಾಬ್ ಸಲಿಂ ಅಕ್ಬರ್, ನಯಾಜ್, ಸುಮ, ಇರ್ಫಾನ್, ಸಮಿಉಲ್ಲಾ ಖಾನ್, ಹಿಂದೂ ಹಾಗೂ ಮುಸಲ್ಮಾನ್ ಮುಖಂಡರು ಭಾಗವಹಿಸಿದ್ದರು.


Spread the love