ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ತಾಯಿಯ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿಯ ಪ್ರಮೋದ್ ಮಧ್ವರಾಜ್!

Spread the love

ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ತಾಯಿಯ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿಯ ಪ್ರಮೋದ್ ಮಧ್ವರಾಜ್!

ಉಡುಪಿ: ಹೇಳಿ ಕೇಳಿ ಈ ಬಾರಿ ಉಡುಪಿಯ ವಿಧಾನಸಭಾ ಚುನಾವಣೆ ಒಂದು ರೀತಿಯಲ್ಲಿ ಗೆಳೆಯರಿಬ್ಬರ ನಡುವಿನ ಕದನ. ಕಾಂಗ್ರೆಸಿನ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಮತ್ತು ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ಅವರು ಶಾಲಾ ಜೀವನದ ಸಹಪಾಠಿಗಳು. ಈ ಬಾರಿಯ ಚುನಾವಣೆಯಲ್ಲಿ ಇಬ್ಬರೂ ಸಹಪಾಠಿಗಳು ಒಂದು ಸೀಟಿಗಾಗಿ ಪರಸ್ಪರ ಚುನಾವಣಾ ಹೋರಾಟಕ್ಕೆ ನಿಂತಿದ್ದು ಇಬ್ಬರೂ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.

ಸೋಮವಾರ ನಾಮಪತ್ರ ಸಲ್ಲಿಕೆಗೆ ಪ್ರಮೋದ್ ಮಧ್ವರಾಜ್ ಅವರು ತಮ್ಮ ತಾಯಿ ಒಂದು ಕಾಲದ ಮಂತ್ರಿ ಹಾಗೂ ಸಂಸದೆ ಮನೋರಮಾ ಮಧ್ವರಾಜ್ ಅವರ ಜೊತೆ ಬಂದು ನಾಮಪತ್ರ ಸಲ್ಲಿಸಿದರೆ ಈ ಕಡೆ ರಘುಪತಿ ಭಟ್ ತಾಯಿ ಸರಸ್ವತಿ ಅಮ್ಮ ಕೂಡ ತನ್ನ ಮಗ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಪ್ರಮೋದ್ ಮಧ್ವರಾಜ್ ಅವರು ನಾಮಪತ್ರವನ್ನು ಸಲ್ಲಿಸಿ ಹೊರಬಂದಾಗ ರಘುಪತಿ ಭಟ್ ಅವರ ತಾಯಿ ನಾಮಪತ್ರ ಸಲ್ಲಿಕೆ ಕಾರ್ಯ ನಡೆಯುವ ಕಟ್ಟಡದಲ್ಲಿ ಇರುವುದನ್ನು ಗಮನಿಸಿ ಅವರ ಬಳಿ ಹೋಗಿ ಅವರಿಂದ ಆಶೀರ್ವಾದವನ್ನು ಪಡೆದರು.

ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಪ್ರಮೋದ್ ಅವರು ಇಂದು ನಮ್ಮ ತಾಯಿಯ ಜನ್ಮ ನಕ್ಷತ್ರ ದಿನ ಅದರಂತೆ ಪುಷ್ಯ ನಕ್ಷತ್ರದಲ್ಲಿ ನಮ್ಮ ತಾಯಿಯ ಜನ್ಮನಕ್ಷತ್ರ ಇದ್ದು ಇದರಿಂದ ನನಗೆ ಒಳ್ಳೆಯದಾಗುತ್ತದೆ ಎಂಬ ಇಚ್ಚೆಯಲ್ಲಿ ಅವರು ನನ್ನ ಜೊತೆ ಬಂದಿದ್ದಾರೆ. ಇನ್ನೂ ತನ್ನ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ಅವರು ನನ್ನ ಪ್ರಾಥಮಿಕ ಶಾಲಾ ಜೀವನದ ಸಹಪಾಠಿ ಹಾಗಾಗಿ ಅವರ ತಾಯಿಗೆ ನನ್ನ ಮೇಲೆ ಅತೀವ ಪ್ರೀತಿ ಮತ್ತು ಅಭಿಮಾನ ಇದೆ. ಅವರು ನನಗೆ ಎಲ್ಲಿ ಸಿಕ್ಕಿದರೂ ಕೂಡ ಆಶೀರ್ವಾದ ಮಾಡುತ್ತಾರೆ. ನಾನು ಅವರ ಬಳಿ ಕೇವಲ ಆಶೀರ್ವಾದವನ್ನು ಮಾತ್ರ ಪಡೆದಿದ್ದೇನೆ ಹೊರತು ಅವರ ಮತವನ್ನು ಕೇಳಿಲ್ಲ ಕಾರಣ ಅವರ ಮಗ ಚುನಾವಣೆಗೆ ಸ್ಪರ್ಧಿಸುತ್ತಿದ್ದು ನಾನು ಅವರ ಮತವನ್ನು ಕೇಳುವುದು ಸರಿಯಲ್ಲ ಹಾಗಾಗಿ ಅವರ ಆಶೀರ್ವಾದವನ್ನು ಬೇಡಿದ್ದೇನೆ ಎಂದರು.


Spread the love