ಬೆಂಗಳೂರಿನಲ್ಲಿ ಅಫಘಾತ; ಕಾರ್ಕಳದ ಯುವಕನ ದುರ್ಮರಣ

Spread the love

ಬೆಂಗಳೂರಿನಲ್ಲಿ ಅಫಘಾತ; ಕಾರ್ಕಳದ ಯುವಕನ ದುರ್ಮರಣ

ಕಾರ್ಕಳ: ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ.

ಮೃತ ಯುವಕನ್ನನ್ನು ಕಾರ್ಕಳ ಮೂಲದ ಜೆಲ್ಸನ್ ಟೆಲ್ಲಿಸ್(26) ಎಂದು ಗುರುತಿಸಲಾಗಿದೆ. ಜೆಲ್ಸನ್ ಬೆಂಗಳೂರಿನ ಏಷ್ಯನ್ ಪೈಂಟ್ಸ್ ಕಂಪೆನಿಯಲ್ಲಿ ಪ್ರೊಜೆಕ್ಟ್ ಸೇಲ್ಸ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಜೆಲ್ಸನ್ ಶನಿವಾರ ಬೆಳಿಗ್ಗೆ ತಮ್ಮ ಬೈಕಿನಲ್ಲಿ ತಮ್ಮ ಕಚೇರಿಗೆ ತೆರಳುತ್ತಿದ್ದ ವೇಳೆ ನೆಲಮಂಗಲ ತಾಲೂಕಿನ ಟಿ ಬೇಗೂರಿನ ಬಳಿ ಲಾರಿಯೊಂದು ಹಿಂದಿನಿಂದ ಜೆಲ್ಸನ್ ಅವರ ಬೈಕಿಗೆ ಹಿಂಬದಿಯಿಂದ ಡಿಕ್ಕಿಹೊಡೆದಿದ್ದು ಬೈಕಿನಿಂದ ರಸ್ತೆಗೆಸೆಯಲ್ಲಪಟ್ಟು ತಲೆಗೆ ತೀವ್ರ ಪೆಟ್ಟುಬಿದ್ದು ಸ್ಥಳದಲ್ಲೇ ಸಾವನಪ್ಪಿದ್ದಾರೆ ಎನ್ನಲಾಗಿದೆ.

ಅಪಘಾತ ಸಂಭವಿಸುತ್ತಿದ್ದಂತೆ ಲಾರಿ ಚಾಲಕ ಪರಾರಿಯಾಗಿದ್ದು, ಲಾರಿಯನ್ನು ವಶಕ್ಕೆ ಪಡೆದಿರುವ ನೆಲಮಂಗಲ

ಸಂಚಾರಿ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


Spread the love