Home Mangalorean News Kannada News ಬ್ರಹ್ಮಾವರ: ಕಳವು ಪ್ರಕರಣದ ಆರೋಪಿಯ ಬಂಧನ

ಬ್ರಹ್ಮಾವರ: ಕಳವು ಪ್ರಕರಣದ ಆರೋಪಿಯ ಬಂಧನ

Spread the love

ಬ್ರಹ್ಮಾವರ: ಕಳವು ಪ್ರಕರಣದ ಆರೋಪಿಯ ಬಂಧನ

ಉಡುಪಿ : ಕುಂದಾಪುರ ತಾಲೂಕು ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಬಿದ್ಕಲ್‌ಕಟ್ಟೆ ಅಂತಯ್ಯ ಶೆಟ್ಟಿಯವರ ಕಟ್ಟಡದಲ್ಲಿರುವ ರವಿ ಶೆಟ್ಟಿ ಎಂಬವರ ಶ್ರೀ ಬೆನಕ ಮೊಬೈಲ್ ಸೇಲ್ಸ್ & ಸರ್ವಿಸ್ ಅಂಗಡಿಯ ಮಾಡಿನ ಹೆಂಚನ್ನು ತೆಗೆದು ೪ ಮೊಬೈಲ್ ಸೆಟ್‌ಗಳನ್ನು ಕಳವು ಮಾಡಿದ ಆರೋಪಿಯನ್ನು ಪಡುನೀಲಾವರ ಬಳಿ ದಸ್ತಗಿರಿ ಮಾಡಲಾಗಿದೆ.

ಬಂಧಿತ ವ್ಯಕ್ತಿಯನ್ನು ಬ್ರಹ್ಮಾವರ ತಾಲೂಕು ಹೊಸಾಳ ಗರಡಿ ನಿವಾಸಿ ನವೀನ್ ಕುಮಾರ್ (25) ಎಂದು ಗುರುತಿಸಲಾಗಿದೆ.

ಪ್ರಕರಣದಲ್ಲಿ ಕಳವಾದ OPPO, Redmi, Lenovo ಮತ್ತು Vivo ಕಂಪೆನಿಯ 4 ಹೊಸ ಮೊಬೈಲ್ ಪೋನ್‌ಗಳನ್ನು (ಅಂದಾಜು ಮೌಲ್ಯ ರೂಪಾಯಿ 50,000/-), ಹಾಗೂ ಕೃತ್ಯಕ್ಕೆ ಬಳಸಿದ ಕೆಎ 20 ಇಕ್ಯೂ 8517 ನಂಬ್ರದ ಪಲ್ಸರ್ ಮೋಟಾರು ಸೈಕಲ್‌ನ್ನು (ಅಂದಾಜು ಮೌಲ್ಯ ರೂಪಾಯಿ 80,000/-) ಸ್ವಾಧೀನಪಡಿಸಲಾಗಿದೆ.

ಆರೋಪಿ ಪತ್ತೆ ಕಾರ್ಯದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಶಾ ಜೇಮ್ಸ್ರವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ ಮತ್ತು ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಟಿ. ಜೈಶಂಕರ್‌ರವರ ಮಾರ್ಗದರ್ಶನದಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಶ್ರೀಕಾಂತ್ ಕೆ. ಹಾಗೂ ಬ್ರಹ್ಮಾವರ ವೃತ್ತ ಕಛೇರಿಯ ಸಿಬ್ಬಂದಿಯವರಾದ ಕೃಷ್ಣಪ್ಪ, ಪ್ರದೀಪ್ ನಾಯಕ್, ವಾಸುದೇವ ಪೂಜಾರಿ, ವಿಕ್ರಮ್, ಶೇಖರ ಹೆಬ್ರಿ, ಬ್ರಹ್ಮಾವರ ಠಾಣಾ ಸಿಬ್ಬಂದಿ ಹೆಚ್.ಸಿ ಪ್ರವೀಣ್ ಶೆಟ್ಟಿಗಾರ್ ಮತ್ತು ಕೋಟ ಠಾಣಾ ಸಿಬ್ಬಂದಿಯವರಾದ ರಾಜೇಶ, ಬಸವರಾಜಪ್ಪರವರು ಪಾಲ್ಗೊಂಡಿರುತ್ತಾರೆ.


Spread the love

Exit mobile version