ಮಂಗಳಮುಖಿಯವರ ವೇಷ ತೊಟ್ಟು ತೊಂದರೆ ನೀಡುತ್ತಿದ್ದ ವ್ಯಕ್ತಿಯ ಬಣ್ಣ ಬಯಲು ಮಾಡಿದ ಸಾಮಾಜಿಕ ಕಾರ್ಯಕರ್ತ

Spread the love

ಮಂಗಳಮುಖಿಯವರ ವೇಷ ತೊಟ್ಟು ತೊಂದರೆ ನೀಡುತ್ತಿದ್ದ ವ್ಯಕ್ತಿಯ ಬಣ್ಣ ಬಯಲು ಮಾಡಿದ ಸಾಮಾಜಿಕ ಕಾರ್ಯಕರ್ತ

ಮಂಗಳೂರು: ವ್ಯಕ್ತಿಯೊಬ್ಬ ಮಂಗಳಮುಖಿಯವರ ವೇಷ ತೊಟ್ಟು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯೋರ್ವನ ನಿಜ ಬಣ್ಣವನ್ನು ಸಾಮಾಜಿಕ ಕಾರ್ಯಕರ್ತ ಸ್ವರಾಜ್ ಎಂಬವರು ಬಯಲು ಮಾಡಿದ ಘಟನೆ ಶುಕ್ರವಾರ ನಡೆದಿದೆ.

ಗುರುವಾರ ಮಧ್ಯಾಹ್ನ 2.30 ರ ಸುಮಾರಿಗೆ ಸಾಮಾಜಿಕ ಕಾರ್ಯಕರ್ತ ಸ್ವರಾಜ್ ಅವರು ತನ್ನ ಕಾರನ್ನು ಕದ್ರಿ ಪಾರ್ಕಿನ ಬಳಿ ನಿಲ್ಲಿಸಿ ವಿಹಾರಕ್ಕೆ ತೆರಳಿದ ವೇಳೆ ವ್ಯಕ್ತಿಯೋರ್ವ ಮಂಗಳಮುಖಿಯ ರೀತಿಯಲ್ಲಿ ವೇಷ ತೊಟ್ಟು ಮಲಗಿದ್ದು, ಕೆಲ ಸಮಯದ ಬಳಿಕ ಹುಡುಗಿಯೋರ್ವಳಿಗೆ ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ಹಣ ನೀಡಲು ಯುವತಿ ನಿರಾಕರಿಸಿದ ವೇಳೆ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸುಲು ಆರಂಭಿಸಿದ್ದ ಎನ್ನಲಾಗಿದೆ.  ಬಳಿಕ ನಕಲಿ ಮಂಗಳಮುಖಿ ಸ್ವರಾಜ್ ಅವರ ಕಾರಿನ ಬಳಿ ಬಂದಿದ್ದು, ಆತನ ವಿಳಾಸ ಕೇಳಿದ ವೇಳೆ ಮುಂಬೈ ಎಂದು ತಿಳಿಸಿದ ಎನ್ನಲಾಗಿದೆ. ಇದರಿಂದ ಆತನ ವರ್ತನೆಯ ಬಗ್ಗೆ ಸಂಶಯಗೊಂಡು ಮತ್ತಷ್ಟು ಪ್ರಶ್ನೆಗಳನ್ನು ಸ್ವರಾಜ್ ಅವರು ಕೇಳಿದ್ದಾರೆ. ಈ ವೇಳೆ ಆತ ಸುಳ್ಳು ಹೇಳುತ್ತಿರುವುದು ಗೊತ್ತಾಗಿ ಆತನ ಬಣ್ಣ ಬಯಲು ಮಾಡಿದ್ದಾರೆ ಎನ್ನಲಾಗಿದೆ.


Spread the love