ಮಂಡ್ಯದ ಬೈಕ್ ಮೆಕ್ಯಾನಿಕ್ ಒಲಿದ ಅದೃಷ್ಟ; ಕೇರಳ ಲಾಟರಿಯಲ್ಲಿ ₹25 ಕೋಟಿ ಬಂಪರ್ ಬಹುಮಾನ!

Spread the love

ಮಂಡ್ಯದ ಬೈಕ್ ಮೆಕ್ಯಾನಿಕ್ ಒಲಿದ ಅದೃಷ್ಟ; ಕೇರಳ ಲಾಟರಿಯಲ್ಲಿ ₹25 ಕೋಟಿ ಬಂಪರ್ ಬಹುಮಾನ!

ಮಂಡ್ಯ: ಕೇರಳದ ಲಾಟರಿಯಲ್ಲಿ ಮಂಡ್ಯದ ವ್ಯಕ್ತಿಗೆ ಕೋಟಿ ಕೋಟಿ ಬಹುಮಾನ ಸಿಕ್ಕಿದೆ. ಪಾಂಡವಪುರ ಪಟ್ಟಣದ ಅಲ್ತಾಫ್ ಎಂಬ ವ್ಯಕ್ತಿಗೆ 25 ಕೋಟಿ ರೂಪಾಯಿ ಬಹುಮಾನ ಲಭಿಸಿದೆ. ಅಲ್ತಾಫ್ ಪಟ್ಟಣದಲ್ಲಿ ಒಂದು ಸಣ್ಣ ಸ್ಕೂಟರ್ ಮೆಕ್ಯಾನಿಕ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇತ್ತೀಚೇಗೆ ಕೇರಳಕ್ಕೆ ಹೋಗಿದ್ದ ವೇಳೆ 500 ರೂ ಕೊಟ್ಟು ಲಾಟರಿ ಖರೀದಿ ಮಾಡಿದ್ದರಂತೆ.

ಸದ್ಯ 25 ಕೋಟಿ ಬಂಪರ್ ಲಾಟರಿ ಅಲ್ತಾಫ್ಗೆ ಸಿಕ್ಕಿದ್ದು, ತೆರಿಗೆ ಕಳೆದು ಸುಮಾರು 17.5 ಕೋಟಿ ರೂಪಾಯಿ ಅಲ್ತಾಫ್ ಗೆ ಸಿಗಲಿದೆ. ಕೋಟಿ ಕೋಟಿ ರೂಪಾಯಿ ಬಹುಮಾನದ ಹಣ ತರಲು ಅಲ್ತಾಫ್ ಹಾಗೂ ಕುಟುಂಬಸ್ಥರು ಕೇರಳಕ್ಕೆ ದೌಡಾಯಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೇರಳದ ಲಾಟರಿ ಭಾಗ್ಯದಲ್ಲಿ ಬಡ ಮೆಕ್ಯಾನಿಕ್ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದು, ಈ ಬಗ್ಗೆ ಆತನ ಸ್ನೇಹಿತರು ಸಂತಸ ವ್ಯಕ್ತಪಡಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments