ಮಾದಕ ವಸ್ತು, ಮದ್ದುಗುಂಡು ಸಹಿತ ಕ್ರಿಮಿನಲ್ ಗಳ ಬಂಧನ – ಎನ್ ಐ ಎ ತನಿಖೆಗೆ ಶರಣ್ ಪಂಪ್ವೆಲ್ ಆಗ್ರಹ
ಮಂಗಳೂರು: ಮಾದಕ ವಸ್ತು ಮತ್ತು ಪಿಸ್ತೂಲ್ ಮದ್ದುಗುಂಡು ಸಹಿತ ಕ್ರಿಮಿನಲ್ ಗಳನ್ನು ಬಂಧಿಸಿದ ಮಂಗಳೂರು ಪೋಲಿಸರಿಗೆ ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್ ಅಭಿನಂದನೆ ಸಲ್ಲಿಸಿದ್ದಾರೆ.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇರಳ, ಕರ್ನಾಟಕದ ಕರಾವಳಿ ಭಾಗಗಳಲ್ಲಿ ದುಷ್ಕ್ರತ್ಯ ನಡೆಸಲು ಸಂಚು ರೂಪಿಸುತ್ತಿದ್ದ 5 ಜನ ಅಂತರಾಜ್ಯ ಕ್ರಿಮಿನಲ್ ಅದ ಮಹಮ್ಮದ್ ಅಲಿ, ಮಹಮ್ಮದ್ ಅಸ್ಗರ್, ಮನ್ಸೂರ್, ನೌಫಲ್ ಮತ್ತು ಅಬ್ದುಲ್ ಲತೀಪ್ ನನ್ನು ಮಾದಕ ವಸ್ತು ಹಾಗೂ ಸಜೀವ ಮದ್ದುಗುಂಡು ಸಹಿತ ಪಿಸ್ತೂಲ್ ಗಳನ್ನು ಮಂಗಳೂರು ಪೋಲಿಸರು ಬಂಧಿಸಿದ್ದಾರೆ. ಜಿಲ್ಲೆಯಲ್ಲಿ ಕುಕೃತ್ಯ ನಡೆಸಲು ಸಂಚು ರೂಪಿಸಿದವರನ್ನು ಬಂಧಿಸಿ ಕರಾವಳಿ ಭಾಗದಲ್ಲಿ ಅಗುವ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ ಪೋಲಿಸರ ಈ ಕಾರ್ಯವನ್ನು ವಿಶ್ವ ಹಿಂದೂ ಪರಿಷತ್ ಅಭಿನಂದಿಸುತ್ತದೆ.
ಪೋಲಿಸರು ಬಂಧಿಸಿದ ಆರೋಪಿಗಳು ನಿ಼ಷೇದಿತ ಪಿ.ಫ್ ಐ ದೇಶದ್ರೋಹಿ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆ, ಕರಾವಳಿಯಲ್ಲಿ ಹಿಂದೂ ನಾಯಕರುಗಳನ್ನು , ಹಿಂದೂಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ಚಟುವಟಿಕೆ ನಡೆಸುವ ಉದ್ದೇಶದಿಂದ ದುಷ್ಕತ್ಯ ನಡೆಸಲು ಸಂಚು ರೂಪಿಸುತಿದ್ದಾರೆ ಎಂಬ ಬಲವಾದ ಶಂಕೆ ವ್ತಕ್ತವಾಗುತ್ತಿದೆ. ಆರೋಪಿಗಳಲ್ಲಿ 5 ಪಿಸ್ತೂಲ್ ಗಳು, ಸಜೀವ ಮದ್ದುಗುಂಡು ಸಹಿತ ಕೆ.ಜಿ ಗಟ್ಟಲೆ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅದರಿಂದ ಕರಾವಳಿಯಲ್ಲಿ ನಿಷೇದಿತ ಪಿ.ಫ್ ಐ ಸಂಘಟನೆಯವರು ಸಕ್ರೀಯವಾಗಿದ್ದು ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಗಲಭೆ ನಡೆಸಲು ಪ್ರಯತ್ನ ಮಾಡುತ್ತಿದ್ದಾರೆ ಆದ್ದರಿಂದ ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ಇವರು ಸಡೆಸಲು ಉದ್ದೆಶಿಸಿರುವ ಪೂರ್ವಯೋಜಿತ ದುಷೃತ್ಯದ ಸತ್ಯಾಸತ್ಯತೆಯನ್ನು ತಿಳಿಯಲು ರಾಷ್ಟೀಯ ತನಿಖಾದಳದ ಮೂಲಕ ತನಿಖೆ ನಡೆಸಬೇಕೇಂದು ರಾಜ್ಯ ಸರಕಾರಕ್ಕೆ ಅಗ್ರಹಿಸುತ್ತೇನೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.