Home Mangalorean News Kannada News ಮೋದಿ ಹಿಂಸಾಚಾರ ಮಾಡಬೇಡಿ ಎಂದು ತಿರುಗಾಡಿದರೆ ಶಿಷ್ಯರಿಂದ ಹಿಂಸಾಚಾರ ಸೃಷ್ಟಿ: ರಮಾನಾಥ ರೈ

ಮೋದಿ ಹಿಂಸಾಚಾರ ಮಾಡಬೇಡಿ ಎಂದು ತಿರುಗಾಡಿದರೆ ಶಿಷ್ಯರಿಂದ ಹಿಂಸಾಚಾರ ಸೃಷ್ಟಿ: ರಮಾನಾಥ ರೈ

Spread the love
RedditLinkedinYoutubeEmailFacebook MessengerTelegramWhatsapp

ಮೋದಿ ಹಿಂಸಾಚಾರ ಮಾಡಬೇಡಿ ಎಂದು ತಿರುಗಾಡಿದರೆ ಶಿಷ್ಯರಿಂದ ಹಿಂಸಾಚಾರ ಸೃಷ್ಟಿ: ರಮಾನಾಥ ರೈ

ಮಂಗಳೂರು: ಮೋದಿ ಧರ್ಮದ ಮೂಲಕ ಹಿಂಸಾಚಾರ ಮಾಡಬೇಡಿ ಎಂದು ದೇಶ ವ್ಯಾಪಿ ಹೇಳಿಕೊಂಡು ತಿರುಗಾಡಿದರೆ ಅವರ ಶಿಷ್ಯರು ಧರ್ಮ, ದೇವರು, ದೇಶಪ್ರೇಮದ ಜತೆಯಲ್ಲಿ ಧರ್ಮದ ಮೂಲಕ ಹಿಂಸಾಚಾರ ಮಾಡುತ್ತಿದ್ದಾರೆ. ಇಂತಹ ಶಿಷ್ಯರಿಗೆ ಎಂದಿಗೂ ಸಾಮಾನ್ಯರು ಮಣೆ ಹಾಕಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ಸಚಿವರು, ಮೈಸೂರು ಸಂಸದ ಪ್ರತಾಪ್ ಸಿಂಹ ಕಾನೂನು ಬಿಟ್ಟು ಎತ್ತರಕ್ಕೆ ಬೆಳೆದವರು. ಸಂಸದರಿಗೆ ಕಾನೂನು ಗೊತ್ತಿಲ್ಲದಿದ್ದರೆ ಸಾಮಾನ್ಯರ ಕತೆ ಏನು ಎಂದು ಪ್ರಶ್ನಿಸಿದರು.

ಸರಕಾರದ ಅಧಿಕೃತ ವಾಹನದಲ್ಲಿ ಚಾಲಕನನ್ನು ಬಿಟ್ಟು ವಾಹನ ಚಾಲನೆ ಮಾಡಕೂಡದು, ಅದರಲ್ಲೂ ಬ್ಯಾರಿಕೇಡ್ ಮುರಿದು ಸರಕಾರ ವಾಹನವನ್ನು ದುರ್ಬಳಕೆ ಮಾಡಿರುವುದು ದೊಡ್ಡ ಅಪರಾಧ ಎಂದು ಸಚಿವರು ಹೇಳಿದರು.


Spread the love
RedditLinkedinYoutubeEmailFacebook MessengerTelegramWhatsapp

Exit mobile version