Home Mangalorean News Kannada News ಯುಎನ್ ಐ ಸುದ್ದಿ ಸಂಸ್ಥೆಯ ನಿವೃತ್ತ ಪತ್ರಕರ್ತ ಮಾಧವ ಆಚಾರ್ ನಿಧನ

ಯುಎನ್ ಐ ಸುದ್ದಿ ಸಂಸ್ಥೆಯ ನಿವೃತ್ತ ಪತ್ರಕರ್ತ ಮಾಧವ ಆಚಾರ್ ನಿಧನ

Spread the love
RedditLinkedinYoutubeEmailFacebook MessengerTelegramWhatsapp

ಯುಎನ್ ಐ ಸುದ್ದಿ ಸಂಸ್ಥೆಯ ನಿವೃತ್ತ ಪತ್ರಕರ್ತ ಮಾಧವ ಆಚಾರ್ ನಿಧನ

ಉಡುಪಿ : ಹಿರಿಯ ಪತ್ರಕರ್ತ ಮಾಧವ ಆಚಾರ್ (67) ಡಿ. 9ರಂದು ಅಸೌಖ್ಯದಿಂದ ಇಂದ್ರಾಳಿಯ ಪತ್ರಕರ್ತರ ಕಾಲನಿಯಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ಮಾಧವ ಆಚಾರ್ ಯುಎನ್‍ಐ ಸುದ್ದಿ ಸಂಸ್ಥೆಯ ವರದಿಗಾರರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು. ಮೈಸೂರು, ಮಣಿಪಾಲದಲ್ಲಿ ಸೇವೆ ಸಲ್ಲಿಸಿದ್ದ ಆಚಾರ್ ಬಳಿಕ ಮಂಗಳೂರನ್ನು ಕೇಂದ್ರವಾಗಿರಿಸಿಕೊಂಡು ದ.ಕ. ಮತ್ತು ಉಡುಪಿ ಜಿಲ್ಲೆಯ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. 2012ರಲ್ಲಿ ನಿವೃತ್ತಿಗೊಂಡ ಬಳಿಕ ವಿಶ್ರಾಂತ ಜೀವನ ನಡೆಸುತ್ತಿದ್ದರು. ಓದುವ ಮತ್ತು ಸಂಗೀತದ ಹವ್ಯಾಸವನ್ನು ಅವರು ಬೆಳೆಸಿಕೊಂಡಿದ್ದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪತ್ರಿಕಾ ದಿನಾಚರಣೆಯ ಗೌರವ  ಅವರಿಗೆ ನೀಡಿತ್ತು. ಮಾಧವ ಆಚಾರ್ಯರ ನಿಧನಕ್ಕೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.


Spread the love
RedditLinkedinYoutubeEmailFacebook MessengerTelegramWhatsapp

Exit mobile version