Home Mangalorean News Kannada News ರಘುಪತಿ ಭಟ್ ಅವರ ಮನೆ ಗೇಟ್ ಬಳಿ ಕಾಯಿಸಿ ನಮ್ಮನ್ನು ವಾಪಸು ಕಳುಹಿಸಿದ್ದಾರೆ – ಡಾ|ಧನಂಜಯ್...

ರಘುಪತಿ ಭಟ್ ಅವರ ಮನೆ ಗೇಟ್ ಬಳಿ ಕಾಯಿಸಿ ನಮ್ಮನ್ನು ವಾಪಸು ಕಳುಹಿಸಿದ್ದಾರೆ – ಡಾ|ಧನಂಜಯ್ ಸರ್ಜಿ

Spread the love

ರಘುಪತಿ ಭಟ್ ಅವರ ಮನೆ ಗೇಟ್ ಬಳಿ ಕಾಯಿಸಿ ನಮ್ಮನ್ನು ವಾಪಸು ಕಳುಹಿಸಿದ್ದಾರೆ – ಡಾ|ಧನಂಜಯ್ ಸರ್ಜಿ

ಉಡುಪಿ: ಡಾ|ಧನಂಜಯ ಸರ್ಜಿ ಸೌಜನ್ಯಕ್ಕೂ ಸಂಪರ್ಕ ಮಾಡಿಲ್ಲ ಎಂದು ಹೇಳಿರುವ ರಘುಪತಿ ಭಟ್ ಅವರನ್ನು ಭೇಟಿ ಮಾಡಲು ಹೋದ ವೇಳೆ ಮನೆಯ ಗೇಟಲ್ಲಿ ನಿಲ್ಲಿಸಿ ನಮ್ಮನ್ನು ವಾಪಸು ಕಳುಹಿಸಿದರು ಇದೊಂದು ವಿಪರ್ಯಾಸದ ಸಂಗತಿ ಎಂದು ಡಾ|ಧನಂಜಯ ಸರ್ಜಿ ತಿರುಗೇಟು ನೀಡಿದ್ದಾರೆ.

ಅವರು ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಬಿಜೆಪಿ ಅಭ್ಯರ್ಥಿ ತನ್ನನ್ನು ಸಂಪರ್ಕಿಸಿಲ್ಲ ಎಂದು ರಘುಪತಿ ಭಟ್ ಆರೋಪಿಸಿದ್ದಾರೆ . ನಾನು ರಘುಪತಿ ಭಟ್ ಗೆ ಮಿಸ್ ಕಾಲ್ ಕೊಟ್ಟಿದ್ದೇನೆ ಎಂದು ಹೇಳುತ್ತಾರೆ. ಆದರೆ ಮಿಸ್ ಕಾಲ್ ಕೊಟ್ಟಿರೋದು ಎಲ್ಲಿ ಅನ್ನೋದು ಮುಖ್ಯವಾದ ವಿಚಾರವಾಗಿದೆ. ಒಮ್ಮೆ ವಿಧಾನಪರಿಷತ್ ಸದಸ್ಯ ಅರುಣ್ ಜೊತೆ ರಘುಪತಿ ಭಟ್ ಅವರ ಹೊಸ ಮನೆಗೆ ಹೋಗಿದ್ದೆ. ಅವರಿಗಾಗಿ ಮನೆಗೆ ಹೋಗಿ ನಾನು ಕಾದಿದ್ದೆ. ಸೆಕ್ಯೂರಿಟಿ ಗಾರ್ಡ್ ಬಳಿ ಎಂಎಲ್ಸಿ ಅರುಣ್ ಬಂದಿದ್ದಾರೆ ಎಂದು ಹೇಳಿ ಕಳುಹಿಸಿದ್ದು ಅವರು ಮನೆಯಲ್ಲಿ ಇಲ್ಲ ಎಂದು ಸೆಕ್ಯೂರಿಟಿ ಗಾರ್ಡ್ ಹೇಳಿದ್ದ.

ಅವರಿಗೆ ಮಾಹಿತಿ ನೀಡಲು ಹೇಳಿದರು ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ ಅಲ್ಲದೆ ರಘುಪತಿ ಭಟ್ಟರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ನಾನು ಕೂಡ ಅವರಿಗೆ ಎರಡು ಬಾರಿ ಕರೆ ಮಾಡಿದ್ದೆ. ಟಿಕೆಟ್ ಘೋಷಣೆ ಆದಾಗಲೂ ರಘುಪತಿ ಭಟ್ ಗೆ ಕರೆ ಮಾಡಿದ್ದು, ಎಂಎಲ್ಸಿ ಅರುಣ್ ಕರೆ ಮಾಡಿದಾಗಲೂ ಅವರು ಸ್ವೀಕರಿಸಿಲ್ಲ ಎಂದರು.

ಬಿಜೆಪಿ ಸಂಘಟನೆಯ ಶಕ್ತಿ ಇರುವ ಪಕ್ಷವಾಗಿದ್ದು, ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ ಶಕ್ತಿ ಇರುವುದು ನಮ್ಮ ಕಾರ್ಯಕರ್ತರಲ್ಲಿ ಎಂದರು.


Spread the love

Exit mobile version