`ವಿಶ್ವ ಏಡ್ಸ್ ದಿನ’ ಜನಜಾಗೃತಿ ಜಾಥಾ

Spread the love

`ವಿಶ್ವ ಏಡ್ಸ್ ದಿನ’ ಜನಜಾಗೃತಿ ಜಾಥಾ

ಉಡುಪಿ: ವಿಶ್ವ ಏಡ್ಸ್ ದಿನದ ಪ್ರಯುಕ್ತ ಸರಕಾರಿ ಪದವಿ ಪೂರ್ವ ಕಾಲೇಜು ಬಿದ್ಕಲ್ ಕಟ್ಟೆ ಕುಂದಾಪುರ ಕಾಲೇಜಿನ ,ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ವಿಭಾಗವಾದ ಭಗತಸಿಂಗ್ ರೋವರ್ ತಂಡದ ರೋವರ್ಸ್ ವಿದ್ಯಾರ್ಥಿಗಳು ಬಿದ್ಕಲ್ ಕಟ್ಟೆ ಕಾಲೇಜಿನಿಂದ ಹೊರಟು ಕೋಟೆಶ್ವರ ಮೂಲಕ ಕುಂದಾಪುರ ಬಸ್ರೂರು ಹುಣಸೆಮಕ್ಕಿಯ ಮೂಲಕ ವಾಪಸ್ ಬಿದ್ಕಲ್ ಕಟ್ಟೆ ಕಾಲೇಜಿನವರೆಗೂ ಸುಮಾರು 50 ಕೀ ಮೀ ಜಾಥಾ ಮಾಡಲಾಯಿತು. ಜಾಥಾಕ್ಕೆ ದಾ `ವಿಶ್ವ ಏಡ್ಸ್ ದಿನ’ದ ಪ್ರಯುಕ್ತ ಜನಜಾಗೃತಿ ಬಿತ್ತಿ ಫಲಕ ಮೂಲಕ ಜನರಲ್ಲಿ ಏಡ್ಸ್ ರೋಗವನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಮಾಡಲಾಯಿತು.

aids-day-jaatha

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಮ ಎಚ್ ನ್ಕಾಕ್ ಅವರ ಮಾರ್ಗದರ್ಶನದಲ್ಲಿ ಕಾಲೇಜಿನ ರೋವರ್ ಸ್ಕೌಟ್ ಲೀಡರ್‍ರಾದ ಶ್ರೀ ರವಿಚಂದ್ರ (ಉಪನ್ಯಾಸಕರು ಸಮಾಜಶಾಸ್ತ್ರ) ಇವರ ನೇತೃತ್ವದಲ್ಲಿ ಸೈಕಲ್ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. (ಫೋಟೋ ಲಗತ್ತಿಸಿದೆ)


Spread the love