Home Mangalorean News Kannada News ಶ್ರೀ ಕೃಷ್ಣ ಜಯಂತಿ ಪ್ರಯುಕ್ತ ಉಚಿತ ಬಿಲ್ವ ಪತ್ರೆ ಸಸಿ ವಿತರಣೆ ಕಾರ್ಯಕ್ರಮಕ್ಕೆ ಪೇಜಾವರ ಶ್ರೀ...

ಶ್ರೀ ಕೃಷ್ಣ ಜಯಂತಿ ಪ್ರಯುಕ್ತ ಉಚಿತ ಬಿಲ್ವ ಪತ್ರೆ ಸಸಿ ವಿತರಣೆ ಕಾರ್ಯಕ್ರಮಕ್ಕೆ ಪೇಜಾವರ ಶ್ರೀ ಚಾಲನೆ

Spread the love

ಶ್ರೀ ಕೃಷ್ಣ ಜಯಂತೀ ಪ್ರಯುಕ್ತ ಉಚಿತ ಬಿಲ್ವ ಪತ್ರೆ ಸಸಿ ವಿತರಣೆ ಕಾರ್ಯಕ್ರಮಕ್ಕೆ ಪೇಜಾವರ ಶ್ರೀ ಚಾಲನೆ

ಉಡುಪಿ : ಅರಣ್ಯ ಇಲಾಖೆ ಸಾಮಾಜಿಕ ಅರಣ್ಯ ವಿಭಾಗ ಉಡುಪಿ ಇವುಗಳ ಜಂಟಿ ಆಶ್ರಯ ದಲ್ಲಿ ಎಸ್ ಎಮ್ ಎಸ್ .ಪಿ ಸಂಸ್ಕೃತ ಕಾಲೇಜಿನ ಎನ್ಎಸ್ ಎಸ್ ಘಟಕಗಳ ಸಹಯೋಗದಲ್ಲಿ ಶ್ರೀ ಕೃಷ್ಣ ಜಯಂತೀ ಪ್ರಯುಕ್ತ ನಾಗರಿಕರು ಭಕ್ತರಿಗೆ ಉಚಿತ ಬಿಲ್ವ ಪತ್ರೆ ಸಸಿ ವಿತರಣೆ ಕಾರ್ಯಕ್ರಮಕ್ಕೆ ಭಾನುವಾರ ಪೇಜಾವರ ಶ್ರೀಗಳು ಚಾಲನೆ ನೀಡಿದರು.

ಉಡುಪಿ ನಾಗರಿಕರು ಭಕ್ತರು ಆರಾಧನೆಗೂ, ಆರೋಗ್ಯಕ್ಕೂ ಶ್ರೇಷ್ಠವಾಗಿರುವ ಬಿಲ್ವವನ್ನು ಮನೆಮನೆಗಳಲ್ಲಿ ನೆಟ್ಟು ಪೋಷಿಸುವಂತೆ ಸ್ವಾಮೀಜಿ ಕರೆನೀಡಿದರು .

ವಲಯ ಅರಣ್ಯಾಧಿಕಾರಿ (ಸಾಮಾಜಿಕ ಅರಣ್ಯ) ರವೀಂದ್ರ ಆಚಾರ್ಯ, ಕಾಲೇಜಿನ ಆಡಳಿತ ಮಂಮಡಳಿ ಕಾರ್ಯದರ್ಶಿ ದೇವಾನಂದ ಉಪಾಧ್ಯಾಯ ಪ್ರಾಚಾರ್ಯ ಡಾ ಎನ್ ಎಲ್ ಭಟ್ ಮಠದ ದಿವಾನ ಎಂ ರಘುರಾಮಾಚಾರ್ಯ, ಉದ್ಯಮಿ ಯಶ್ ಪಾಲ್ ಸುವರ್ಣ, ದೇವರಾಜ್ ಪಾಣ , ಉಪನ್ಯಾಸ ವರ್ಗ ವಿದ್ಯಾರ್ಥಿಗಳು ಉಪಸ್ಥಿತರಿದ್ದರು . ವಾಸುದೇವ ಭಟ್ ಪೆರಂಪಳ್ಳಿ ಸಂಯೋಜಿಸಿದರು .

ಮಂಗಳವಾರದವರೆಗೆ ಪ್ರತಿ ದಿನ ಬೆಳಿಗ್ಗೆ 10 ರಿಂದ ಸಂಜೆ 6 ವರೆಗೆ ಸಸಿ ವಿತರಣೆ ನಡೆಯಲಿದೆ


Spread the love

Exit mobile version