Home Mangalorean News Kannada News ಸಚಿವರಾಗಿ ಆಯ್ಕೆಯಾದ ಖಾದರ್ ಅವರಿಗೆ ಮಾಜಿ ಸಚಿವ ಪ್ರಮೋದ್ ಅವರಿಂದ ಅಭಿನಂದನೆ

ಸಚಿವರಾಗಿ ಆಯ್ಕೆಯಾದ ಖಾದರ್ ಅವರಿಗೆ ಮಾಜಿ ಸಚಿವ ಪ್ರಮೋದ್ ಅವರಿಂದ ಅಭಿನಂದನೆ

Spread the love

ಸಚಿವರಾಗಿ ಆಯ್ಕೆಯಾದ ಖಾದರ್ ಅವರಿಗೆ ಮಾಜಿ ಸಚಿವ ಪ್ರಮೋದ್ ಅವರಿಂದ ಅಭಿನಂದನೆ

ಉಡುಪಿ: ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಖಾತೆ ಸಚಿವರಾಗಿ ಆಯ್ಕೆಗೊಂಡ ಯು.ಟಿ. ಖಾದರ್ ಅವರನ್ನು ಮಾಜಿ ಮೀನುಗಾರಿಕಾ, ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರು ತಮ್ಮ ನಿವಾಸದಲ್ಲಿ ಶನಿವಾರ ಅಭಿನಂದಿಸಿದರು.

ಈ ವೇಳೆ ಹಾಲಿ ಮತ್ತು ಮಾಜಿ ಸಚಿವರು ಕೆಲಹೊತ್ತು ಕುಶಲೋಪರಿ ಮಾತನಾಡಿದ್ದಲ್ಲದೆ ಉಡುಪಿ ಜಿಲ್ಲೆಗೆ ನಗರಾಭಿವೃದ್ಧಿ ಹಾಗೂ ವಸತಿ ಖಾತೆಯ ಮೂಲಕ ಹೆಚ್ಚಿನ ಅನುದಾನ ದೊರಕಿಸಿಕೊಡುವಂತೆ ಪ್ರಮೋದ್ ಅವರು ಸಚಿವರಲ್ಲಿ ವಿನಂತಿಸಿದರು.

ಈ ವೇಳೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಎಐಸಿಸಿ ಸದಸ್ಯ ಅಮೃತ್ ಶೆಣೈ ಹಾಗೂ ಇತರರು ಉಪಸ್ಥಿತರಿದ್ದರು.


Spread the love

Exit mobile version