ಸಿಸಿಐಎಂ ಸದಸ್ಯರಾಗಿ ಡಾ|ತನ್ಮಯ ಗೋಸ್ವಾಮಿ

Spread the love

ಸಿಸಿಐಎಂ ಸದಸ್ಯರಾಗಿ ಡಾ|ತನ್ಮಯ ಗೋಸ್ವಾಮಿ

ಉಡುಪಿ: ಕೇಂದ್ರ ಸರಕಾರದ ಆಯುಷ್ ಇಲಾಖೆಯ ಸೆಂಟ್ರಲ್ ಕೌನ್ಸಿಲ್ ಫಾರ್ ಇಂಡಿಯನ್ ಮೆಡಿಸಿನ್ (ಸಿಸಿಐಎಂ) ಆಯುರ್ವೇದ್ ವಿಭಾಗದ ಸದಸ್ಯರಾಗಿ ಉಡುಪಿಯ ಆಯುರ್ವೇದದ ವೈದ್ಯ ಡಾ|ತನ್ಮಯ ಗೋಸ್ವಾಮಿ ಅವರನ್ನು ಕೇಂದ್ರ ಸರಕಾರ ನೇಮಕಗೊಳಿಸಿದೆ.

ಆಯುರ್ವೇದ, ಸಿಧ್ದ, ಯುನಾನಿ ವಿಭಾಗಗಳಿಗೆ ಒಟ್ಟು 24 ಸದಸ್ಯರನ್ನು ನೇಮಿಸಲಾಗಿದೆ. ಇವರಲ್ಲಿ ಕರ್ನಾಟಕದಿಂದ ಐವರು ಇದ್ದು ಇತರರು ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಕೊಪ್ಪಳದ ವೈದ್ಯರು. ಆಯುರ್ವೇದ ಪ್ರಚಾರ, ಶಿಕ್ಷಣ ಕ್ರಮ ಇತ್ಯಾದಿಗಳ ನೀತಿ ನಿರೂಪಣಾ ಹೊಣೆಗಾರಿಕೆ ಈ ಮಂಡಳಿಗೆ ಇದೆ. ಉಡುಪಿ ಜಿಲ್ಲೆಗೆ ಸಿಸಿಐಎಂ ಸದಸ್ಯತ್ವ ಸಿಗುವುದು ಇದೇ ಪ್ರಥಮ ಬಾರಿಯಾಗಿದೆ.


Spread the love