ಸ್ವಹಿತಾಸಕ್ತಿಗಾಗಿ ಧಾರ್ಮಿಕ ವಿಚಾರ ಬಳಸಿಕೊಂಡು ಅಶಾಂತಿ ಸೃಷ್ಟಿ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ : ಪ್ರಖ್ಯಾತ ಶೆಟ್ಟಿ

Spread the love

ಸ್ವಹಿತಾಸಕ್ತಿಗಾಗಿ ಧಾರ್ಮಿಕ ವಿಚಾರ ಬಳಸಿಕೊಂಡು ಅಶಾಂತಿ ಸೃಷ್ಟಿ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ : ಪ್ರಖ್ಯಾತ ಶೆಟ್ಟಿ

ಉಡುಪಿ: ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ದೇವಸ್ಥಾನ ಸಂಪ್ರದಾಯವನ್ನು ತಮ್ಮ ಪ್ರಚಾರಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುವುದು ಮಾರಕಾಸ್ತ್ರಗಳಿಂದ ಗುಂಪಿನೊಂದಿಗೆ ಮಾರಣಾಂತಿಕ ಹಲ್ಲೆ ನೆಡೆಸಿ ದೇವಸ್ಥಾನದಲ್ಲಿ ಅಶಾಂತಿ ಸೃಷ್ಟಿ ಮಾಡುವ ಚೈತ್ರ ಕುಂದಾಪುರ ಅವರ ವರ್ತನೆ ನಿಜಕ್ಕೂ ಬೇಸರ ತರಿಸುವಂಥದ್ದು ಮತ್ತು ಖಂಡನೀಯ. ಸುಬ್ರಹ್ಮಣ್ಯದಲ್ಲಿ ಅಶಾಂತಿ ಮೂಡಿಸಲು ಪ್ರಯತ್ನಿಸಿ, ಹಲ್ಲೆ ಮಾಡಿದ ಚೈತ್ರಾ ಕುಂದಾಪುರ ಮತ್ತು ಇತರರ ಮೇಲೆ ಸೂಕ್ತ ತನಿಖೆಯಾಗಲಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ ಶೆಟ್ಟಿ ಅಗ್ರಹಿಸಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಕರೆ ನೀಡಿದ್ದ ಬಾರತ್ ಬಂದ್ ಸಂದರ್ಭದಲ್ಲಿ, ಉಡುಪಿಯಲ್ಲಿ ಅಶಾಂತಿ ಸೃಷ್ಟಿ ಮಾಡಿ ಲಾಠಿ ಚಾರ್ಜ್, ನಿಷೇಧಾಜ್ಣೆ ಜಾರಿಯಾಗಲು ಮೂಲ ಕಾರಣ ಚೈತ್ರ ಕುಂದಾಪುರ. ಇಂತವರಿಂದ ಕರಾವಳಿ ಜಿಲ್ಲೆಯಲ್ಲಿ ಶಾಂತಿ ಕದಡುತ್ತಿದ್ದು, ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಪೋಲಿಸ್ ಇಲಾಖೆ ಇಂತವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಚೈತ್ರ ಕುಂದಾಪುರ ನೀಡುವ ಪ್ರಚೋದನಕಾರಿ ಹೇಳಿಕೆಗೆ ಕಡಿವಾಣ ಹಾಕಬೇಕು. ಹಿಂದೂ ದರ್ಮವು ಶಾಂತಿಯ ಸಂಕೇತ. ದೇವಸ್ಥಾನದಲ್ಲಿ ನಿನ್ನೆ ನಡೆದ ಈ ಘಟನೆಯನ್ನು ಖಂಡಿಸುತ್ತೆನೆ ಎಂದು ಪ್ರಖ್ಯಾತ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Spread the love