ಹ್ಯಾಪ್ಪಿ ಬರ್ತ್ ಡೇ ಸಿಎಂ!: ಸಿದ್ದರಾಮಯ್ಯ ಹಲವು ಉಚಿತ ‘ಭಾಗ್ಯ’ಗಳ ಸರದಾರ

Spread the love

ಹ್ಯಾಪ್ಪಿ ಬರ್ತ್ ಡೇ ಸಿಎಂ!: ಸಿದ್ದರಾಮಯ್ಯ ಹಲವು ಉಚಿತ ‘ಭಾಗ್ಯ’ಗಳ ಸರದಾರ

ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಅವರು ರಾಜ್ಯ ಕಂಡ ಯಶಸ್ವಿ ರಾಜಕಾರಣಿಯಾಗಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ರಾವ್ ಹೇಳಿದ್ದಾರೆ.

ತನ್ನ ಸುಧೀರ್ಘ ರಾಜಕಾರಣದದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸತತ 14 ಬಜೆಟ್ ಗಳನ್ನು ಮಂಡಿಸುವ ಮೂಲಕ ದಾಖಲೆ ಬರೆದಿದ್ದಾರೆ. ತನ್ನ ಪ್ರಥಮ ಅವಧಿಯ ಮುಖ್ಯಮಂತ್ರಿ ಸಮಯದಲ್ಲಿ ಅನ್ನಭಾಗ್ಯ ದಂತಹ ಹಲವಾರು ಯೋಜನೆಗಳ ಮೂಲಕ ಜನಮೆಚ್ಚುಗೆಗೆ ಪಾತ್ರರಾಗಿದ್ದರು

ಪ್ರಸ್ತುತ ಎರಡನೇ ಅವಧಿಗೆ ಮುಖ್ಯ ಮಂತ್ರಿಯಾಗಿ ಚುನಾವಣಾ ಪೂರ್ವದಲ್ಲಿ ನುಡಿದಂತೆ ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ, ಅನ್ನಭಾಗ್ಯ, ಶಕ್ತಿ ಯೋಜನೆಗಳನ್ನು ಜಾರಿಗೆ ತಂದು ಸಮೃದ್ಧ ಕರ್ನಾಟಕದ ಕನಸನ್ನು ನನಸು ಮಾಡಿದ್ದಾರೆ.

ಹಲವು ಉಚಿತ ‘ಭಾಗ್ಯ’ಗಳ ಸರದಾರ ಎಂದೇ ಕರೆಯಲ್ಪಡುವ ಸಿದ್ದರಾಮಯ್ಯ, ಕರ್ನಾಟಕ ರಾಜ್ಯದ ಬಡವರ ಪಾಲಿಗೆ ಮಾಜಿ ಸಿಎಂ ದೇವರಾಜ ಅರಸ್ ಅವತಾರವೆಂದೇ ಪರಿಗಣಿತವಾಗಿದ್ದಾರೆ. 2ನೇ ಅವಧಿಗೆ ಮತ್ತೆ ಉನ್ನತ ಹುದ್ದೆಗೆ ಮರಳುವ ಮೂಲಕ ಇತಿಹಾಸ ಸೃಷ್ಟಿಸಿದ ಸಮಾಜವಾದಿ ನಾಯಕ ಹಾಗೂ ಅಹಿಂದ ಹೋರಾಟಗಾರರಾಗಿ ಮೂಡಿ ಬಂದವರು.

ಕರ್ನಾಟಕ ರಾಜ್ಯ ಕಂಡ ಅತ್ಯಂತ ಜನಪ್ರಿಯ ರಾಜಕಾರಣಿಗಳಲ್ಲಿ ಸಿದ್ದರಾಮಯ್ಯ ಅವರದ್ದು ಮುಂಚೂಣಿ ಹೆಸರು. ಅತ್ಯಂತ ಜನಪ್ರಿಯ ಮಾಜಿ ಸಿಎಂಗಳಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರಾಗಿದ್ದು ಇನ್ನಷ್ಟು ಜನಪ್ರಿಯ ಕೆಲಸಗಳನ್ನು ಮುಂದುವರೆಸಲಿ ಎಂದು ಶುಭ ಹಾರೈಸಿದ್ದಾರೆ.


Spread the love