ಅಜ್ಜರಕಾಡು ಜಿಲ್ಲಾಸ್ಪತ್ರೆಯ ಬಡ ರೋಗಿಗಳಿಗೆ ಸಿಹಿತಿಂಡಿ ವಿತರಣೆ

Spread the love

ಅಜ್ಜರಕಾಡು ಜಿಲ್ಲಾಸ್ಪತ್ರೆಯ ಬಡ ರೋಗಿಗಳಿಗೆ ಸಿಹಿತಿಂಡಿ ವಿತರಣೆ

ಉಡುಪಿ: ಕ್ರಿಸ್ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ಸಮಾನ ಮನಸ್ಕರರು ಮತ್ತು ಉಡುಪಿಯ ಖ್ಯಾತ ಉದ್ಯಮಿಗಳ ಸಹಯೋಗದಿಂದ ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಬಡ ರೋಗಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ವೈದ್ಯಧಿಕಾರಿಯಾದ ಡಾ ಅಶೋಕ್. ಎಚ್,ಡಾ ವಾಸುದೇವ್, ನರ್ಸಿಂಗ್ ಸುಪರಿಡೆಂಟ್ ರತ್ನಾವತಿ, ಉಡುಪಿ ಬ್ಲಾಕ್ ಅಧ್ಯಕ್ಷರಾದ ರಮೇಶ್ ಕಾಂಚನ್, ನಗರ ಸಭಾ ಸದಸ್ಯರಾದ ವಿಜಯ್ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಮಂಚಿ, ಪ್ರಕಾಶ್ ಅಂದ್ರಾದೆ, ಬ್ಲಾಕ್ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಅಧ್ಯಕ್ಷರಾದ ಸುರೇಂದ್ರ ಆಚಾರ್ಯ, ಹಮ್ಮದ್ ಉಡುಪಿ, ಸಾಯಿರಾಜ್, ಹಬೀಬ್, ಅಜಯ್ ಕಪ್ಪೆಟ್ಟು ಮತ್ತಿತರರು ಉಪಸ್ಥಿತಿರಿದ್ದರು.


Spread the love