Home Mangalorean News Kannada News ಅಡ್ಯಾರ್ ಕಣ್ಣೂರಿನಲ್ಲಿ ಭೀಕರ ರಸ್ತೆ ಅಪಘಾತ; ಯುವಕ ಮೃತ -ಮೂವರಿಗೆ ಗಾಯ

ಅಡ್ಯಾರ್ ಕಣ್ಣೂರಿನಲ್ಲಿ ಭೀಕರ ರಸ್ತೆ ಅಪಘಾತ; ಯುವಕ ಮೃತ -ಮೂವರಿಗೆ ಗಾಯ

Spread the love

ಅಡ್ಯಾರ್ ಕಣ್ಣೂರಿನಲ್ಲಿ ಭೀಕರ ರಸ್ತೆ ಅಪಘಾತ; ಯುವಕ ಮೃತ -ಮೂವರಿಗೆ ಗಾಯ

ಮಂಗಳೂರು: ನಗರ ಹೊರವಲಯದ ಅಡ್ಯಾರ್ ಕಣ್ಣೂರು ಮಸೀದಿಯ ಬಳಿ ಮಂಗಳವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟು ಇತರ ಮೂವರು ಗಾಯಗೊಂಡ ಘಟನೆ ನಡೆದಿದೆ.

ಮೃತಪಟ್ಟ ಯುವಕನನ್ನು ಅಡ್ಯಾರ್ ನಿವಾಸಿ ಮುಹಮ್ಮದ್ ಫಾರೂಕ್(25) ಎಂದು ಗುರುತಿಸಲಾಗಿದೆ. ಹನೀಫ್, ಜುನೈದ್, ಸರ್ಫ್‍ರಾಜ್ ಎಂಬವರಿಗೆ ಗಾಯಗಳಾಗಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾತ್ರಿ ಸುಮಾರು 1 ಗಂಟೆ ವೇಳೆಗೆ ಮಳೆ ಸುರಿಯುತ್ತಿದ್ದ ಕಾರಣ ದ್ವಿಚಕ್ರ ಸವಾರನೊಬ್ಬ ಮಸೀದಿ ಬಳಿ ನಿಂತಿದ್ದ ಪರಿಚಯದ ಕಾರಲ್ಲಿ ಹೋಗಿ ಕುಳಿತು ಕಾರೊಳಗಿದ್ದ ಇತರ ಇಬ್ಬರು ಯುವಕರೊಂದಿಗೆ ಮಾತಾಡುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಕಾರೊಂದು ನಿಯಂತ್ರಣ ತಪ್ಪಿ ಈ ಕಾರಿಗೆ ಢಿಕ್ಕಿ ಹೊಡೆದಿದೆ.

ಸ್ಥಳಕ್ಕೆ ಮಂಗಳೂರು ಸಂಚಾರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡರು.


Spread the love

Exit mobile version