Home Mangalorean News Kannada News ಅನಂತ ಕುಮಾರ್ ಹೆಗಡೆಯವರ ಬಗ್ಗೆ ಮಾತನಾಡುವುದಕ್ಕಿಂತ ಸುಮ್ಮನಿರುವುದು ಒಳ್ಳೆಯದು – ಮಂಕಾಳ್ ವೈದ್ಯ

ಅನಂತ ಕುಮಾರ್ ಹೆಗಡೆಯವರ ಬಗ್ಗೆ ಮಾತನಾಡುವುದಕ್ಕಿಂತ ಸುಮ್ಮನಿರುವುದು ಒಳ್ಳೆಯದು – ಮಂಕಾಳ್ ವೈದ್ಯ

Spread the love

ಅನಂತ ಕುಮಾರ್ ಹೆಗಡೆಯವರ ಬಗ್ಗೆ ಮಾತನಾಡುವುದಕ್ಕಿಂತ ಸುಮ್ಮನಿರುವುದು ಒಳ್ಳೆಯದು – ಮಂಕಾಳ್ ವೈದ್ಯ

ಕುಂದಾಪುರ: ಸಂಸದ ಅನಂತ ಕುಮಾರ್ ಹೆಗಡೆ ಅವರದು ಅಹಂಕಾರದ ಮಾತು. ಒಬ್ಬ ವ್ಯಕ್ತಿ ಸರಿ ಇಲ್ಲ ಎಂದರೆ ನಾವು ಅವರ ಹತ್ತಿರವೂ ಸುಳಿಯದೆ ಬೇರೆ ದಾರಿಯೇ ಹಿಡಿಯುತ್ತೇವೆ. ಅಂತವರ ಬಗ್ಗೆ ಮಾತನಾಡುವುದಕ್ಕಿಂತ ಸುಮ್ಮನಿರುವುದೇ ಒಳಿತು ಎಂದು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ್ ವೈದ್ಯ ಕಿಡಿಕಾರಿದರು.

ನನ್ನ ವಿರುದ್ದ ಸ್ಪರ್ಧಿಗಳೇ ಇಲ್ಲ ಎಂದಿದ್ದ ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆಗೆ ತಿರುಗೇಟು ನೀಡಿದ ಅವರು, ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಮ್ಮಲ್ಲಿಯೂ ಪೈಪೋಟಿ ಇದೆ. ನಾವು ಪ್ರಬಲರಾಗಿದ್ದು, ಅವರನ್ನು ಸೋಲಿಸುತ್ತೇವೆ ಎಂದರು.

ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಿವರಾಮ್ ಹೆಬ್ಬಾರ್ ಅವರನ್ನು ನಾವು ಬರಬೇಡಿ ಎಂದಿಲ್ಲ. ನಮ್ಮ ಪಕ್ಷದ ತತ್ವ, ಸಿದ್ದಾಂತಗಳನ್ನು ಒಪ್ಪಿ ಬರುವುದಿದ್ದರೆ ನಮ್ಮದು ಸ್ವಾಗತವಿದೆ ಎಂದರು.

ಮೀನುಗಳ ಸಂತತಿ ವೃದ್ದಿಸುವ ಉದ್ದೇಶದಿಂದ ಕೃತಕ ಬಂಡೆಗಳ ಸಾಲು ಅಳವಡಿಕೆಗೆ ಮುಂದಾಗಿದ್ದು, 17ಕೋಟಿ. 37 ಲಕ್ಷರೂ. ವೆಚ್ಚದಲ್ಲಿ ಮಂಗಳೂರಿನಿಂದ ಕಾರವಾರದ ತನಕ 52 ಕಡೆಗಳಲ್ಲಿ ಕೃತಕ ಬಂಡೆಗಳನ್ನು ನಿರ್ಮಿಸಲಿದ್ದೇವೆ ಎಂದರು.

ಸಂತ್ರಸ್ತ ಮೀನುಗಾರರಿಗೆ ಪರಿಹಾರ ಹಾಗೂ ವಿವಿಧ ಸವಲತ್ತು ವಿತರಣೆಯ ಕಾರ್ಯಕ್ರಮಕ್ಕೆ ಹಾಜರಾಗದ ಶಾಸಕ ಗುರುರಾಜ್ ಗಂಟಿಹೊಳೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಡವರಿಗೆ ಸಹಾಯಗುತ್ತದೆ ಅಂತಾದರೆ ಶಾಸಕರು ಬರಲಿ, ಬಾರದೇ ಇರಲಿ ನಾನು ನನ್ನ ಕೆಲಸ ಮಾಡಿಕೊಂಡು ಹೋಗುತ್ತೇನೆ. ಕಾರ್ಯಕ್ರಮಕ್ಕೆ ಎಲ್ಲರನ್ನೂ ಆಹ್ವಾನಿಸಿದ್ದೇವೆ. ಈ ಕಾರ್ಯಕ್ರಮ ಶಾಶ್ವತವಾಗಿ ಮನದಲ್ಲಿ ಉಳಿಯಬೇಕು, ಬಡವರಿಗೆ ಮುಟ್ಟಬೇಕು ಎನ್ನುವ ದಿಸೆಯಲ್ಲಿ ಆಯೋಜಿಸಿದ್ದೇವೆ ಬಿಟ್ಟರೆ ಪ್ರಚಾರಕ್ಕಾಗಿ ಈ ಕಾರ್ಯಕ್ರಮ ಮಾಡಿಲ್ಲ ಎಂದರು.


Spread the love

Exit mobile version