ಅಮೃತ್ ಶೆಣೈಗೆ  ‘ಭಾರತ ಜ್ಯೋತಿ ಪ್ರಶಸ್ತಿ ಪ್ರದಾನ

Spread the love

ಅಮೃತ್ ಶೆಣೈಗೆ  ‘ಭಾರತ ಜ್ಯೋತಿ ಪ್ರಶಸ್ತಿ ಪ್ರದಾನ

ಉಡುಪಿ: ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ ಹಾಗೂ ಇತರ ವಿವಿಧ ಕ್ಷೇತ್ರದ ಸಾಧನೆಗಾಗಿ ಯುವ ನಾಯಕ ಅಮೃತ್ ಶೆಣೈ ಅವರಿಗೆ ಬುಧವಾರ ದಿಲ್ಲಿಯ ಪ್ರತಿಷ್ಠಿತ India International Friendship Society ಸಂಸ್ಥೆಯು ‘ಭಾರತ ಜ್ಯೋತಿ’ ಪ್ರಶಸ್ತಿ ನೀಡಿ ಗೌರವಿಸಿತು.

ಸುಮಾರು ಒಂದೂವರೆ ದಶಕದಿಂದ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ ಹೀಗೆ ಹಲವು ರಂಗದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಉಡುಪಿ ಭಾಗದ ರಾಜಕೀಯ ಯುವ ನೇತಾರ, ಮಂಗಳೂರು ವಿಶ್ವವಿದ್ಯಾಲಯ ಸೆನೆಟ್ ಸದಸ್ಯರೂ ಆದ ಅಮೃತ್ ಶೆಣೈ ಅವರ ವಿವಿಧ ಕ್ಷೇತ್ರದ ಸೇವೆ ಹಾಗೂ ಸಾಧನೆ ಗುರುತಿಸಿ ದಿಲ್ಲಿಯ ಪ್ರತಿಷ್ಠಿತ India International Friendship Society ಸಂಸ್ಥೆಯು ‘ಭಾರತ ಜ್ಯೋತಿ’ ಪ್ರಶಸ್ತಿ ನೀಡಿ ಗೌರವಿಸಿದೆ.


Spread the love