Home Mangalorean News Kannada News ಅಮೆರಿಕದಲ್ಲಿ ಹತ್ಯೆಗೀಡಾದವರಿಗೆ ತುರ್ತು ನೆರವಿಗೆ ವಿದೇಶಾಂಗ ಸಚಿವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹ

ಅಮೆರಿಕದಲ್ಲಿ ಹತ್ಯೆಗೀಡಾದವರಿಗೆ ತುರ್ತು ನೆರವಿಗೆ ವಿದೇಶಾಂಗ ಸಚಿವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹ

Spread the love

ಅಮೆರಿಕದಲ್ಲಿ ಹತ್ಯೆಗೀಡಾದವರಿಗೆ ತುರ್ತು ನೆರವಿಗೆ ವಿದೇಶಾಂಗ ಸಚಿವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹ

ಮಂಗಳೂರು : ಮಂಗಳೂರು ಮೂಲದ ರಿಯಾನ ಮತ್ತು ಅವರ ಪತಿ ನರೆನ್ ಪ್ರಭು ಅವರನ್ನು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಹತ್ಯೆ ಮಾಡಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಅಮೆರಿಕದಲ್ಲಿ ಇತ್ತೀಚೆಗೆ ಭಾರತೀಯ ಮೂಲದವರ ಹತ್ಯೆ ಹೆಚ್ಚುತ್ತಿರುವುದು ಖಂಡನಾರ್ಹವಾಗಿದ್ದು, ಭಾರತೀಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಸಂಸದ ನಳಿನ್ ಕುಮಾರ್ ಕಟೀಲ್ ಲಿಖಿತವಾಗಿ ಆಗ್ರಹಿಸಿದ್ದಾರೆ.

ಮೃತ ರಿಯಾನ ಮತ್ತು ಅವರ ಪತಿ ನರೆನ್ ಪ್ರಭು ನನ್ನ ಸಂಸತ್ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವುದರಿಂದ ಅವರ ಮನೆಯವರಿಗೆ ತುರ್ತು ನೆರವಿನ ಅಗತ್ಯವಿದೆ. ಹತ್ಯೆಗೀಡಾದವರ ಮೃತದೇಹವನ್ನು ಮಂಗಳೂರಿಗೆ ತರಲು ಸೂಕ್ತ ವ್ಯವಸ್ಥೆ ಮಾಡಲು ವಿದೇಶಾಂಗ ಸಚಿವಾಲಯ ತುರ್ತು ಕ್ರಮ ಕೈಗೊಳ್ಳಬೇಕು. ಈ ಮೂಲಕ ಅವರ ಕುಟುಂಬಿಕರಿಗೆ ನೆರವಾಗಬೇಕು ಎಂದು ಸಂಸದರಾದ ನಳೀನ್ ಕುಮಾರ್ ಕಟೀಲ್ ಒತ್ತಾಯಿಸಿದ್ದಾರೆ


Spread the love

Exit mobile version