Home Mangalorean News Kannada News ಅಮ್ಮುಂಜೆ ವೀರಯೋಧ ಯಾದವ ಫ್ರೆಂಡ್ಸ್ ಮಹಿಳಾ ಘಟಕ ಉದ್ಘಾಟನಾ ಕಾರ್ಯಕ್ರಮ

ಅಮ್ಮುಂಜೆ ವೀರಯೋಧ ಯಾದವ ಫ್ರೆಂಡ್ಸ್ ಮಹಿಳಾ ಘಟಕ ಉದ್ಘಾಟನಾ ಕಾರ್ಯಕ್ರಮ

Spread the love

ಅಮ್ಮುಂಜೆ ವೀರಯೋಧ ಯಾದವ ಫ್ರೆಂಡ್ಸ್ ಮಹಿಳಾ ಘಟಕ ಉದ್ಘಾಟನಾ ಕಾರ್ಯಕ್ರಮ

ಮಂಗಳೂರು: ಅಮ್ಮುಂಜೆ ವೀರಯೋಧ ಯಾದವ ಫ್ರೆಂಡ್ಸ್ ಇದರ 16 ನೇ ವರ್ಧಂತ್ಯುತ್ಸವ ಹಾಗೂ ವೀರಯೋಧ ಯಾದವ ಫ್ರೆಂಡ್ಸ್ ಮಹಿಳಾ ಘಟಕ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಈ ವಿಶೇಷ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸ್ವಚ್ಚ ಭಾರತ್ ಯೋಜನೆಯಡಿಯಲ್ಲಿ ಸಂಘದ ಸದಸ್ಯರು ಊರ ಜನರ ಜೊತೆಗೆ ಸೇರಿ ‘ಸ್ವಚ್ಚ ಅಮ್ಮುಂಜೆ’ ಹೆಸರಿನಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಅಮ್ಮುಂಜೆ ಶ್ರೀ ವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ಮಿಶನ್ ನ ಸಾಮಾಜಿಕ ಕಾರ್ಯಕರ್ತ ಸೌರಜ್ ಹಾಗೂ ವಕೀಲೆ ಸಹನಾ ಕುಂದರ್ ಅತಿಥಿಯಾಗಿ ಭಾಗವಹಿಸಿದರು.

ಸುಮಾರು ಒಂದು ಕೀಲೊ ಮೀಟರ್ ವ್ಯಾಪ್ತಿಯಲ್ಲಿ ನಡೆದ ಈ ವಿಶೇಷ ಸ್ವಚ್ಛತಾ ಕಾರ್ಯಕ್ರಮಕ್ಕೆ ಯಾಧವ ಫ್ರೆಂಡ್ಸ್ ಅಮ್ಮುಂಜೆ ಮತ್ತೊಮ್ಮೆ ಸಾಕ್ಷಿಯಾಯಿತು.

ಈ ಕಾರ್ಯಕ್ರಮದಲ್ಲಿ ಯಾದವ ಫ್ರೆಂಡ್ಸ್ ನ ಗೌರವಾಧ್ಯಕ್ಷರಾದ ಕರುಣಾಕರ ಅಳ್ವ, ಎಸ್ ಅರ್ ಹಿಂದೂ ಫ್ರೆಂಡ್ಸ್ ನ ಅಧ್ಯಕ್ಷ ಲೋಕೆಶ್ ಭರಣಿ, ಸಹ್ಯಾದ್ರಿ ವಿದ್ಯಾ ಸಂಸ್ಥೆಯ ಅಡಳಿತ ನಿರ್ದೆಶಕ ಅಮ್ಮುಂಜೆ ಗುತ್ತು ದೇವದಾಸ್ ಹೆಗಡೆ ಯೋಗ ಗುರು ಸುಬ್ಬರಾವ್, ಗಣೇಶ್ ಕಲಾಯಿ , ವಿಶ್ವಂಬರ ವರಕೋಡಿ , ಪ್ರವೀಣ್ ಬೆಂಜನಪದವು, ಶಶಿಧರ್ ಭಟ್ , ಚಂದ್ರಹಾಸ್ ಶೆಟ್ಟಿಗಾರ್ , ಯಾಧವ ಫ್ರೆಂಡ್ಸ್ ಸಂಘದ ಅಧ್ಯಕ್ಷ ಪ್ರಶಾಂತ್ ಕುಲಾಲ್ ಅಮ್ಮುಂಜೆ, ಯಾದವ ಫ್ರೆಂಡ್ಸ್ ಮಹಿಳಾ ಘಟಕದ ಅಧ್ಯಕ್ಷೆ ಚೇತನಾ ರಾವ್ ಮಹಿಳಾ ಘಟಕದ ಗೌರವಧ್ಯಕ್ಷೆ ವಿಜಯಲಕ್ಷ್ಮಿ ಬಳ್ಳಾಲ್ , ಸುಕೇಶ್ ಚೌಟ, ಯಾಧವ ಫ್ರೆಂಡ್ಸ್ ನ ಸ್ಥಾಪಕ ಅಧ್ಯಕ್ಷರಾದ ಜರ್ನಾಧನ ಪೂಜಾರಿ ಬಾರಿಂಜೆ ಮತ್ತಿತರ ಉಪಸ್ಥಿತರಿದ್ದರು.


Spread the love

Exit mobile version