Home Mangalorean News Kannada News ಉಡುಪಿ: ಶಿರ್ವದಲ್ಲಿ ಚೂರಿ ಇರಿತಕ್ಕೆ ಒಳಗಾದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು

ಉಡುಪಿ: ಶಿರ್ವದಲ್ಲಿ ಚೂರಿ ಇರಿತಕ್ಕೆ ಒಳಗಾದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು

Spread the love

ಉಡುಪಿ: ಶಿರ್ವದಲ್ಲಿ ಮೇ 5 ನಡೆದ ಕಾರ್ಯಕ್ರಮವೊಂದರಲ್ಲಿ ಚೂರಿ ಇರಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೇ 5 ರಂದು 10 ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ.

accused_m

ಮೇ 10 ಶಿರ್ವದ ಖಾಸಗಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನವೀದ್ ಎಂಬುವರು ಆಗಮಿಸಿದ್ದು ಇದೇ ಕಾರ್ಯಕ್ರಮಕ್ಕೆ ಎಂಟನಿ ಡಿಸೋಜಾ ಎನ್ನುವವರು ಕೂಡ ಆಗಮಿಸಿದ್ದು, ಎಂಟನಿ ಕ್ಷುಲ್ಲಕ್ಕ ವಿಷಯಕ್ಕೆ ಕೇಟರಿಂಗ್ ನವರ ಜೊತೆ ಜಗಳವಾಡುತ್ತಿದ್ದಾಗ ಅದನ್ನು ತಪ್ಪಿಸಲು ಹೋದ ನವೀದ್ ಅವರಿಗೆ ತನ್ನಲ್ಲಿದ್ದ ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ್ದರು. ಕೂಡಲೇ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಬಳಿಕ ಮಂಗಳೂರಿನ ಕೆಎಮ್ ಸಿ ಆಸ್ಪತ್ರೆಗೆ ಅವರನ್ನು ವರ್ಗಾಯಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೇ 10ರಂದು ರಾತ್ರಿ ನವೀದ್ ಸಾವನಪ್ಪಿದ್ದಾರೆ.

ಶಿರ್ವ ಪೋಲಿಸರು ತನಿಖೆಯನ್ನು ನಡೆಸುತ್ತಿದ್ದಾರೆ.

 


Spread the love

Exit mobile version