ಉದಯರಾಗ ಸರಣಿ ಸಂಗೀತ ಕಾರ್ಯಕ್ರಮದ 4ನೇ ಸಂಗೀತ ಕಛೇರಿ

Spread the love

ಉದಯರಾಗ ಸರಣಿ ಸಂಗೀತ ಕಾರ್ಯಕ್ರಮದ 4ನೇ ಸಂಗೀತ ಕಛೇರಿ
ಸುರತ್ಕಲ್ : ನಾಗರಿಕಾ ಸಲಹಾ ಸಮಿತಿ ಮತ್ತು ಮಣಿ ಕೃಷ್ಣಸ್ವಾಮಿ ಅಕಾಡಮಿ ಸಂಸ್ಥೆಗಳ ಆಶ್ರಯದಲ್ಲಿ ಸುರತ್ಕಲ್ ಫ್ಲೈಓವರ್‍ನ ತಳಭಾಗದಲ್ಲಿ ತಿಂಗಳ ಪ್ರಥಮ ಭಾನುವಾರ ಬೆಳಗ್ಗೆ 6.00ರಿಂದ 7.00ರ ತನಕ ನಡೆಯುವ ಸರಣಿ ಸಂಗೀತ ಕಾರ್ಯಕ್ರಮದ 4ನೇ ಸಂಗೀತ ಕಛೇರಿಯನ್ನು ಶ್ರೀವಿಭು ಭಟ್ ಹಾಡುಗಾರಿಕೆ ಮೂಲಕ ನಡೆಸಿಕೊಟ್ಟರು ಇವರಿಗೆ ಗೌತಮ ವಯಲಿನ್‍ನಲ್ಲಿ ಹಾಗೂ ಕೃಷ್ಣ ಪವನ್ ಕುಮಾರ್ ಮೃದಂಗದಲ್ಲಿ ಸಹಕರಿಸಿದರು. ಇದೇ ಸಂದರ್ಭ ರಾಜ್ಯಕ್ಕೆ ಪಿ ಯು ಸಿಯಲ್ಲಿ 2ನೇ ರ್ಯಾಂಕ್ ಪಡೆದ ಕುಮಾರಿ ಅನಘ್ರ್ಯ ಇವರನ್ನು ಗೌರವಿಸಲಾಯಿತು.


Spread the love