Home Mangalorean News Kannada News ಉದ್ಯಮಶೀಲತಾ ಅಭಿವೃದ್ಧಿ ಯೋಜನೆ: ಆಟೋರಿಕ್ಷಾದ ಕೀ ಫಲಾನುಭವಿಗಳಿಗೆ ಹಸ್ತಾಂತರ

ಉದ್ಯಮಶೀಲತಾ ಅಭಿವೃದ್ಧಿ ಯೋಜನೆ: ಆಟೋರಿಕ್ಷಾದ ಕೀ ಫಲಾನುಭವಿಗಳಿಗೆ ಹಸ್ತಾಂತರ

Spread the love

ಉದ್ಯಮಶೀಲತಾ ಅಭಿವೃದ್ಧಿ ಯೋಜನೆ: ಆಟೋರಿಕ್ಷದ ಕೀ ಫಲಾನುಭವಿಗಳಿಗೆ ಹಸ್ತಾಂತರ

ಉಡುಪಿ :ಡಾ.ಬಿಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ, ಉಡುಪಿ ಜಿಲ್ಲೆ ಇವರ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಇಬ್ಬರು ಫಲಾನುಭವಿಗಳಿಗೆ ಆಟೋರಿಕ್ಷಾ ಖರೀದಿಗೆ ಆರ್ಥಿಕ ನೆರವು ರೂ. 4.21ಲಕ್ಷ ಮಂಜೂರಾಗಿದ್ದು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಡುಪಿ ಜಿಲ್ಲೆ ಇವರು ಜುಲೈ 11 ರಂದು ಆಟೋರಿಕ್ಷದ ಕೀ ಯನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಡುಪಿ ಮುಖ್ಯ ಯೋಜನಾಧಿಕಾರಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಉಪಸ್ಥಿತರಿದ್ದರು.


Spread the love

Exit mobile version