Home Mangalorean News Kannada News ಉರ್ವಾಸ್ಟೋರ್:  ಸ್ಥಳೀಯರಿಂದಲೇ ರಸ್ತೆ ದುರಸ್ಥಿ

ಉರ್ವಾಸ್ಟೋರ್:  ಸ್ಥಳೀಯರಿಂದಲೇ ರಸ್ತೆ ದುರಸ್ಥಿ

Spread the love

ಉರ್ವಾಸ್ಟೋರ್:  ಸ್ಥಳೀಯರಿಂದಲೇ ರಸ್ತೆ ದುರಸ್ಥಿ

ಉರ್ವಾಸ್ಟೋರ್ ಜಂಕ್ಷನ್‌ನಿಂದ ಸುಂಕದಕಟ್ಟೆ ಪ್ರದೇಶಕ್ಕೆ ಹೋಗುವ ರಸ್ತೆಯಲ್ಲಿ ತುಂಬಾ ಹೊಂಡಗಳಿದ್ದು ವಾಹನಗಳು ಸಂಚರಿಸಲು ತುಂಬಾ ಹರಸಾಹಸ ಪಡುತ್ತಿದ್ದವು. ಇದರ ಬಗ್ಗೆ ಸ್ಥಳೀಯ ನಾಗರಿಕರು, ನಗರ ಪಾಲಿಕೆಗೆ ಎಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದಿಸದ ಕಾರಣ ಸುಂಕದಕಟ್ಟೆ ಪ್ರದೇಶದ ನಾಗರಿಕರು  ತಾವೇ ಕಾಮಗಾರಿ ಮಾಡಿ ರಸ್ತೆಯಲ್ಲಿನ ಹೊಂಡಗಳನ್ನು ಮುಚ್ಚಿದರು.

ಈ ದುರಸ್ಥಿ ಕಾರ್ಯಕ್ರಮದಲ್ಲಿ ಸ್ಥಳೀಯರಾದ ಮನೋಜ್ ಕುಲಾಲ್, ಯೋಗೀಶ್ ಕುಲಾಲ್, ಕೇಶವ ಎಂ. ಎಚ್, ಕೃಷ್ಣ ಗಟ್ಟಿ, ಶಶಿ, ಪ್ರಶಾಂತ್ ಎಂ.ಬಿ, ನಾಗೆಂದ್ರ, ರಘುವೀರ, ಸನತ್, ಇಕ್ಬಾಲ್ ಮುಂತಾದವರು ಉಪಸ್ಥಿತರಿದ್ದರು.


Spread the love

Exit mobile version