Home Mangalorean News Kannada News ಎನ್.ಎಸ್.ಯು.ಐ ರಾಷ್ಟೀಯ ಪ್ರಧಾನ ಕಾರ್ಯದರ್ಶಿಯಾಗಿ ನಾಗೇಶ್ ಕರಿಯಪ್ಪ ನೇಮಕ

ಎನ್.ಎಸ್.ಯು.ಐ ರಾಷ್ಟೀಯ ಪ್ರಧಾನ ಕಾರ್ಯದರ್ಶಿಯಾಗಿ ನಾಗೇಶ್ ಕರಿಯಪ್ಪ ನೇಮಕ

Spread the love

ಎನ್.ಎಸ್.ಯು.ಐ ರಾಷ್ಟೀಯ ಪ್ರಧಾನ ಕಾರ್ಯದರ್ಶಿಯಾಗಿ ನಾಗೇಶ್ ಕರಿಯಪ್ಪ ನೇಮಕ

ನವದೆಹಲಿ: ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ(ಎನ್.ಎಸ್.ಯು.ಐ) ರಾಷ್ಟೀಯ ಪ್ರಧಾನ ಕಾರ್ಯದರ್ಶಿಯಾಗಿ ಮೈಸೂರಿನ ನಾಗೇಶ್ ಕರಿಯಪ್ಪ ಅವರನ್ನು ನೇಮಿಸಲಾಗಿದೆ.

ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು ಈ ಆದೇಶ ಹೊರಡಿಸಿದ್ದಾರೆ. ನಾಗೇಶ್ ಕರಿಯಪ್ಪ ಅವರು ಪ್ರಸ್ತುತ ರಾಷ್ಟೀಯ ಕಾರ್ಯದರ್ಶಿಯಾಗಿ, ಆಂಧ್ರಪ್ರದೇಶ, ಝಾರ್ಖಂಡ್ ರಾಜ್ಯಗಳ (ಎನ್ಎಸ್ಯುಐ)ನ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಈ ಹಿಂದೆ ಕರ್ನಾಟಕ ಎನ್ಎಸ್ಯುಐನಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನಾಗೇಶ್ ಕರಿಯಪ್ಪ ಸೇವೆ ಸಲ್ಲಿಸಿದ್ದಾರೆ.


Spread the love

Exit mobile version