ಕಂಕನಾಡಿ- ನಂದಿಗುಡ್ಡೆ 4 ಲೈನ್ ರಸ್ತೆ ನಿರ್ಮಿಸಲು ಶಾಸಕ ಜೆ.ಆರ್.ಲೋಬೊ ನಿರ್ಧಾರ

Spread the love

ಕಂಕನಾಡಿ- ನಂದಿಗುಡ್ಡೆ 4 ಲೈನ್ ರಸ್ತೆ ನಿರ್ಮಿಸಲು ಶಾಸಕ ಜೆ.ಆರ್.ಲೋಬೊ ನಿರ್ಧಾರ

ಮಂಗಳೂರು: ಕಂಕನಾಡಿಯಿಂದ ನಂದಿಗುಡ್ಡೆ ತನಕ ಚತುಶ್ಪಥ ರಸ್ತೆಯನ್ನು ತ್ವರಿತ ಗತಿಯಲ್ಲಿ ಮುಂದುವರಿಸಲು ಶಾಸಕ ಜೆ.ಆರ್.ಲೋಬೊ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಯಿತು.

24 ಮೀಟರ್ ಅಗಲದ ರಸ್ತೆಯನ್ನು ನಿರ್ಮಿಸುವಂತೆಯೂ, ಅದಕ್ಕೆ ಅಗತ್ಯವಾದ ಹಣಕಾಸು ಸೌಲಭ್ಯವನ್ನು ಒದಗಿಸಿಕೊಳ್ಳುವಂತೆ ಶಾಸಕ ಜೆ.ಆರ್.ಲೋಬೊ ಅವರು ಸೂಚಿಸಿದರು.

ಈ ಕೆಲಸಕ್ಕೆ 2.5 ಕೋಟಿ ಹಣವಿದ್ದು ಉಳಿಕೆ ಹಣವನ್ನೂ ಒದಗಿಸುವುದಾಗಿ ಸಭೆಗೆ ಮಂಗಳೂರು ನಗರ ಪಾಲಿಕೆ ಆಯುಕ್ತರಾದ ಮಹಮ್ಮದ್ ನಜೀರ್ ಮಾಹಿತಿ ನೀಡಿದರು.

ಈ ಕಾಮಗಾರಿಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಭೂಮಿಯನ್ನ್ನು ಬಿಟ್ಟುಕೊಡುವ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅವರ ಮನವೊಲಿಸಿ ಮತ್ತು ಅಭಿವೃದ್ಧಿ ಆದರೆ ಅದರ ಪ್ರಯೋಜನವನ್ನು ಜನರಿಗೆ ಮನವರಿಕೆ ಮಾಡಿಕೊಡುವಂತೆಯೂ ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.

ರಸ್ತೆಯ ಜೊತೆಗೆ ಫುಟ್ ಪಾತ್, ನೀರು ಹರಿದು ಹೋಗಲು ಅವಕಾಶ ಹಾಗೂ ಮೂಲಭೂತ ವ್ಯವಸ್ಥೆಯನ್ನು ಜನರಿಗೆ ಮಾಡಿಕೊಡುವಂತೆ ಶಾಸಕರು ಸೂಚಿಸಿದರು.

ಸಭೆಯಲ್ಲಿ ಅಂಗಳೂರು ನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ರವೂಫ್, ಕಮಿಷನರ್ ಮಹಮ್ಮದ್ ನಜೀರ್, ಇ.ಇ. ಲಿಂಗೇಗೌಡ ಮುಂತಾದವರು ಉಪಸ್ಥಿತರಿದ್ದರು.

2 ಕೋಟಿ ವೆಚ್ಚದ ಬಜಾಲ್ ಕಲ್ಲಕಟ್ಟೆ ರಸ್ತೆಯ ಪ್ರಗತಿ ವೀಕ್ಷಿಸಿದ ಶಾಸಕ ಜೆ.ಆರ್.ಲೋಬೊ

ಮಂಗಳೂರು: ಬಜಾಲ್ ಕಲ್ಲಕಟ್ಟೆ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯಿಂದ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದು ಕಾಮಗಾರಿಯನ್ನು ಶಾಸಕ ಜೆ.ಆರ್.ಲೋಬೊ ಅವರು ವೀಕ್ಷಿಸಿದರು.

ಇಲ್ಲಿ ಸಂಪರ್ಕ ರಸ್ತೆಯನ್ನು ನಿರ್ಮಿಸುವಂತೆ ಶಾಸಕ ಜೆ.ಆರ್.ಲೋಬೊ ಅವರ ಶಿಫಾರಸಿನಂತೆ ಕೈಗೊಳ್ಳಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯವರು ಕೈಗೊಂಡಿರುವ ಅಭಿವೃದ್ಧಿ ಕೆಲಸಗಳನ್ನು ಖುದ್ದು ನೋಡಿದ ಶಾಸಕರು ಮುಂದೆ ಇಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರು.

ಈ ಪ್ರದೇಶದಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ಜನರೂ ಕೂಡಾ ಅಭಿವೃದ್ಧಿ ಕಾಮಗಾರಿಗಳಿಗೆ ಬೆಂಬಲ ನೀಡುವಂತೆ ಆ ಮೂಲಕ ಮುಂದೆ ಆಗಬೇಕಾದ ಕೆಲಸಗಳನ್ನು ಮಾಡಿಸಲು ನೆರವಾಗುತ್ತದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.


Spread the love