ಕಾಂಗ್ರೆಸ್ ಕಾರ್ಯಕರ್ತನ ಮೇಲೆ  ನಡೆದ ಹಲ್ಲೆಗೆ ಉಡುಪಿ ವಿಧಾನಸಭಾ ಯುವ ಕಾಂಗ್ರೆಸ್ ಖಂಡನೆ

Spread the love

ಕಾಂಗ್ರೆಸ್ ಕಾರ್ಯಕರ್ತನ ಮೇಲೆ  ನಡೆದ ಹಲ್ಲೆಗೆ ಉಡುಪಿ ವಿಧಾನಸಭಾ ಯುವ ಕಾಂಗ್ರೆಸ್ ಖಂಡನೆ

ಉಡುಪಿ: ಬಡಾನಿಡಿಯೂರು ಪಾವಂಜೆಗುಡ್ಡೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಸುನಿಲ್ ಡಿ’ಸೋಜಾರವರಿಗೆ ಬಿಜೆಪಿಯ ಬಡಾನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಉಮೇಶ್ ಪೂಜಾರಿ ಮತ್ತು ಸಂಗಡಿಗರು ರಾತ್ರಿಯ ವೇಳೆ ಪಾನಮತ್ತರಾಗಿ ಹಲ್ಲೆ ನಡೆಸಿರುವುದನ್ನು ಉಡುಪಿ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿಯವರು ಖಂಡಿಸಿದ್ದಾರೆ.

ರಾಜಕೀಯ ದ್ವೇಷದ ಹಿನ್ನಲೆಯಲ್ಲಿ ನಡೆದ ಈ ಹಲ್ಲೆ ಸಿ.ಸಿ.ಟಿವಿಯಲ್ಲಿ ದಾಖಲಾಗಿದ್ದು ಕಣ್ಣೆದುರು ಕಾಣುವ ಉಮೇಶ ಪೂಜಾರಿ ತಾನು ಊರಿನಲ್ಲಿರಲಿಲ್ಲ ಎಂದು ಸುಳ್ಳು ಹೇಳುತ್ತಿರುವುದು ಬಿಜೆಪಿಯ ಸಂಸ್ಕøತಿಯನ್ನು ಜನರಿಗೆ ಮತ್ತೊಮ್ಮೆ ಪರಿಚಯಿಸಿದಂತಾಗಿದೆ. ತಪ್ಪಿತಸ್ತರನ್ನು ಬಂದಿಸಿ ಕ್ರಮ ಕೈಗೊಳ್ಳಬೇಕು, ಸುನಿಲ್ ಡಿ’ಸೋಜಾರಿಗೆ ಸೂಕ್ತ ಭದ್ರತೆ ನೀಡಬೇಕೆಂದು, ಮತ್ತು ಈ ಹಲ್ಲೆಯನ್ನು ಉಡುಪಿ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿಯವರು  ಪ್ರಕಟಣೆಯಲ್ಲಿ ತಿಳಿಸದ್ದಾರೆ


Spread the love