ಕಾಂಗ್ರೆಸ್ ಮುಖಂಡ ಕಿರಣ್ ಕುಮಾರ್ ಉದ್ಯಾವರ ಬಿಜೆಪಿ ಸೇರ್ಪಡೆ

Spread the love

ಕಾಂಗ್ರೆಸ್ ಮುಖಂಡ ಕಿರಣ್ ಕುಮಾರ್ ಉದ್ಯಾವರ ಬಿಜೆಪಿ ಸೇರ್ಪಡೆ

ಉಡುಪಿ: ಕಾಂಗ್ರೆಸ್ ಮುಖಂಡ, ರಾಷ್ಟ್ರೀಯ ಮೀನುಗಾರ ಕಾಂಗ್ರೆಸ್ ನವದೇಹಲಿ ಯ ಕಾರ್ಯದರ್ಶಿಯಾಗಿದ್ದ ಕಿರಣ್ ಕುಮಾರ್ ಉದ್ಯಾವರ . ಕಾಪು ಶಾಸಕರಾದ ಲಾಲಾಜಿ ಮೆಂಡನ್ ರವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಗೊಂಡರು.

ಕಿರಣ್ ಕುಮಾರ್ ಉದ್ಯಾವರ APMC ಸದಸ್ಯ, ಮಾಜಿ ತಾಲೂಕು ಹಾಗೂ ಗ್ರಾಮ ಪಂಚಾಯ್ತ್ ಸದಸ್ಯ, ಉದ್ಯಾವರಹಿತ್ಳು ಮೊಗವೀರ ಗ್ರಾಮ ಸಭಾದ ಉಪಾಧ್ಯಕ್ಷ, ಹಾಗೂ ಹದಿನಾಲ್ಕು ಪಟ್ನ ಮೊಗವೀರ ಗ್ರಾಮ ಸಭಾದ ಕಮಿಟಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಉದ್ಯಾವರ ಗ್ರಾಮದ ಪರಿವಾರ ಪ್ರಮುಖರಾದ, ಕಾಪು ಕ್ಷೇತ್ರದ ಮಾಜಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಸುವರ್ಣ ಬೋಳ್ಜೆ, ಉದ್ಯಾವರ ಬಿಜೆಪಿ ಸ್ಥಾನೀಯ ಮಾಜಿ ಅಧ್ಯಕ್ಷರು,ಹಾಗೂ ಮಾಜಿ ಗ್ರಾಮ ಪಂಚಾಯ್ತ್ ಮಾಜಿ ಅಧ್ಯಕ್ಷರಾದ ವಿಲ್ಸೊನ್ ರಾಜಕುಮಾರ್, APMC ಹಾಗೂ ಉದ್ಯಾವರ ಗ್ರಾಮ ಪಂಚಾಯ್ತ್ ಮಾಜಿ ಅಧ್ಯಕ್ಷರಾದ ಶ್ರೀ ವಿಜಯಕುಮಾರ್ ಉದ್ಯಾವರ, ಉದ್ಯಾವರ ಗ್ರಾಮ ಪಂಚಾಯ್ತ್ ಮಾಜಿ ಉಪಾಧ್ಯಕ್ಷರಾದ  ರಾಧಾಕೃಷ್ಣ ಬೋಳ್ಜೆ, ಉಡುಪಿ ತಾಲೂಕು ಪಂಚಾಯ್ತ್ ಮಾಜಿ ಉಪಾಧ್ಯಕ್ಷರಾದ ಗಣೇಶ್ ಕುಮಾರ್ ಹಾಗೂ ಉದ್ಯಾವರ ಸ್ಥಾನೀಯ ಸಮಿತಿಯ ಮಾಜಿ ಕಾರ್ಯದರ್ಶಿ ಹಾಗೂ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ವಿನೋದ್ ಕುಮಾರ್ ಹಾಗೂ ಮಾಜಿ ಸದಸ್ಯರಾದ ಸೋಮನಾಥ್ ದೇವಾಡಿಗ ಹಾಗೂ ಪರಮೇಶ್ವರ್ ಉಪಸ್ಥಿತರಿದ್ದರು


Spread the love