Home Mangalorean News Kannada News ಕಾರು ಸರ್ವೀಸ್ ಬೇಗ ಮಾಡಿಕೊಡು ಎಂದಿದ್ದಕ್ಕೆ ಗುಂಡಿಟ್ಟು ಕೊಲೆ

ಕಾರು ಸರ್ವೀಸ್ ಬೇಗ ಮಾಡಿಕೊಡು ಎಂದಿದ್ದಕ್ಕೆ ಗುಂಡಿಟ್ಟು ಕೊಲೆ

Spread the love
RedditLinkedinYoutubeEmailFacebook MessengerTelegramWhatsapp

ಕಾರು ಸರ್ವೀಸ್ ಬೇಗ ಮಾಡಿಕೊಡು ಎಂದಿದ್ದಕ್ಕೆ ಗುಂಡಿಟ್ಟು ಕೊಲೆ

ಮಡಿಕೇರಿ: ಆಯುಧ ಪೂಜೆ ಹಿನ್ನೆಲೆಯಲ್ಲಿ ಬೇಗನೇ ಕಾರು ವಾಷ್ ಮಾಡಿಕೊಡುವಂತೆ ಒತ್ತಾಯಿಸಿದ್ದರಿಂದ ಸರ್ವೀಸ್ ಸ್ಟೇಷನ್ ಮಾಲೀಕ ಕಾರಿನ ಓನರ್ ಗೆ ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಶೇಖರ್ (45) ಕೊಲೆಯಾದ ವ್ಯಕ್ತಿ. ಮಡಿಕೇರಿಯ ಸೋಮವಾರ ಪೇಟೆ ತಾಲೂಕಿನ ಶನಿವಾರ ಪೇಟೆಯಲ್ಲಿ ಈ ಘಟನೆ ನಡೆದಿದೆ. ಶನಿವಾರ ಸಂತೆ ಹೋಬಳಿಯ ಗುಂಡುರಾವ್ ಬಡಾವಣೆ ನಿವಾಸಿಯಾದ ಶೇಖರ್ ಇಂದು ಬೆಳಗ್ಗೆ ಕಾರನ್ನು ಸರ್ವೀಸ್ ಗೆ ಬಿಟ್ಟಿದ್ದರು, ಮತ್ತೆ ಕಾರು ತೆಗೆದು ಕೊಳ್ಳಲು ಬಂದಾಗ ಇನ್ನೂ ವಾಷಿಂಗ್ ಆಗಿರಲಿಲ್ಲ. ಈ ವೇಳೆ ತನ್ನ ಕಾರನ್ನು ಬಿಟ್ಟು ಬೇರೆ ಕಾರಿಗೆ ವಾಟರ್ ಸರ್ವೀಸ್ ಮಾಡುತ್ತಿದ್ದುದ್ದಕ್ಕೆ ಶೇಖರ್ ಸರ್ವೀಸ್ ಸ್ಟೇಷನ್ ಮಾಲೀಕನ ಜೊತೆ ಜಗಳ ಮಾಡಿದ್ದಾರೆ.

ಈ ವೇಳೆ ಆಕ್ರೋಶ ಗೊಂಡ ಸರ್ವೀಸ್ ಸ್ಟೇಷನ್ ಮಾಲಕ ಅಬ್ದುಲ್ ರುಬ್ಜು ಎಂಬಾತ ಮನೆಗೆ ಹೋಗಿ ಗನ್ ತಂದು ಗ್ರಾಹಕ ಶೇಖರ್ ಮೇಲೆ ಗುಂಡು ಹಾರಿಸಿದ್ದಾನೆ. ಕೂಡಲೇ ಶೇಖರ್ ಅವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಇನ್ನು ಆಕ್ರೋಶಗೊಂಡ ಶೇಖರ್ ಸ್ನೇಹಿತರು ಹಾಗೂ ಕುಟುಂಬಸ್ಥರು ಸರ್ವೀಸ್ ಸ್ಟೇಷನ್ ಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅಲ್ಲಿದ್ದ ಇತರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಘಟನೆ ನಂತರ ಸೋಮವಾರ ಪೇಟೆ ಪೊಲೀಸರು ಸರ್ವೀಸ್ ಸ್ಟೇಷನ್ ಮಾಲೀಕನನ್ನು ಬಂಧಿಸಿದ್ದಾರೆ.


Spread the love
RedditLinkedinYoutubeEmailFacebook MessengerTelegramWhatsapp

Exit mobile version