ಕುಂದಾಪುರ:  ಅಬಕಾರಿ ದಾಳಿ – ಆಕ್ರಮ ಮದ್ಯ ವಶ

Spread the love

ಕುಂದಾಪುರ:  ಅಬಕಾರಿ ದಾಳಿ – ಆಕ್ರಮ ಮದ್ಯ ವಶ

ಕುಂದಾಪುರ: ತಲ್ಲೂರು ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶನಿವಾರ ಕೆಎ20 ಡಿ 2180 ಟಾಟಾ ಏಸ್ ಗೂಡ್ಸ್ ವಾಹನದ ಫ್ಲಾಟ್ ಫಾರ್ಮ್ ಕೆಳಗಡೆ ವಿಶೇಷ ಕಂಪಾರ್ಟ್ಮೆಂಟ್ ರಚಿಸಿಕೊಂಡು ಅದರಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 20.250 ಲೀಟರ್ ಗೋವಾ ಮಧ್ಯವನ್ನು ವಶಪಡಿಸಿಕೊಂಡಿರುವ ಅಬಕಾರಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಕುಂದಾಪುರ ವಲಯ ಅಬಕಾರಿ ಉಪನಿರೀಕ್ಷಕ ನಿತ್ಯಾನಂದ ಅವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಶನಿವಾರ ನಡೆಸಿದ ದಾಳಿಯಲ್ಲಿ 3.26 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆನಗಳ್ಳಿ ಗ್ರಾಮದ ಕಂಪನತಪ್ಪಲಿನ ನೆಲ್ಸನ್ ಡಿಸೋಜ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕಾರ್ಯಚರಣೆಯಲ್ಲಿ ಕುಂದಾಪುರ ವಲಯದ ಅಬಕಾರಿ ಸಿಬ್ಬಂದಿಗಳಾದ ರವಿಚಂದ್ರ ನಾಯ್ಕ, ಶಂಕ್ರಪ್ಪ ಹಾಗೂ ವಾಹನ ಚಾಲಕ ಚಂದ್ರಶೇಖರ್ ಇದ್ದರು.


Spread the love
Subscribe
Notify of

0 Comments
Inline Feedbacks
View all comments